ಆ್ಯಪ್ನಗರ

ಬೆಳಗಾವಿ: ಕಾಡಾನೆ ದಾಳಿಗೆ ಕಬ್ಬು, ಭತ್ತದ ಬೆಳೆ ನಾಶ, ರೈತರ ಆತಂಕ

​​ಆನೆ ದಾಳಿಯಿಂದ ಉಂಟಾದ ಬೆಳೆಹಾನಿಗೆ ಸೂಕ್ತ ಪರಿಹಾರ ವಿತರಿಸಬೇಕು ಮತ್ತು ಬೆಳೆ ಹಾಳು ಮಾಡುತ್ತಿರುವ ಆನೆಯನ್ನು ಆದಷ್ಟು ಬೇಗ ಮರಳಿ ಅರಣ್ಯಕ್ಕೆ ಸಾಗಿಸಬೇಕು ಎಂದು ಚುಂಚವಾಡ ಹಾಗೂ ಸುತ್ತಲಿನ ಭಾಗದ ರೈತರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

Vijaya Karnataka Web 8 Dec 2020, 11:54 pm
ಕಕ್ಕೇರಿ: ದಾಂಡೇಲಿ ಅರಣ್ಯದಿಂದ ತನ್ನ ಗುಂಪಿನಿಂದ ಬೇರ್ಪಟ್ಟ ಕಾಡಾನೆಯೊಂದು ಸಮೀಪದ ಚುಂಚವಾಡ ಗ್ರಾಮ ವ್ಯಾಪ್ತಿಯ ಹೊಲ-ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿ ಮಾಡಿದೆ.
Vijaya Karnataka Web ಆನೆ ದಾಳಿ ಸಂಗ್ರಹ ಚಿತ್ರ
ಆನೆ ದಾಳಿ ಸಂಗ್ರಹ ಚಿತ್ರ


ಚುಂಚವಾಡ ಗ್ರಾಮದ ರೈತರಾದ ಶರೀಫ್‌ ಹಲಸಗಿ, ಪ್ರವೀಣ ಮಾಂಡವಿ, ಗಜಾನನ ಪಾಟೀಲ, ಬಳಿರಾಮ ಪಾಟೀಲ ಹಾಗೂ ಇತರೆ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಕಬ್ಬು, ಭತ್ತ ಮತ್ತು ಇತರೆ ಬೆಳೆಗಳನ್ನು ಆನೆ ತುಳಿದು ಹಾಳು ಮಾಡಿದೆ.

ಚುಂಚವಾಡ-ಕರೀಕಟ್ಟಿ ಭಾಗದ ಕಬ್ಬಿನ ಜಮೀನುಗಳಿಗೆ ನುಗ್ಗಿದ ಆನೆ ಕಟಾವಿಗೆ ಬಂದ ಕಬ್ಬಿನ ಬೆಳೆಯನ್ನು ತಿಂದು-ತುಳಿದು ಹಾಳು ಮಾಡಿದೆ. ಕರೀಕಟ್ಟಿ ಗ್ರಾಮದ ಸುಭಾಷ ತಳವಾರ, ಗಣಪತಿ ತಳವಾರ ಹಾಗೂ ಇತರೆ ರೈತರ ಜಮೀನುಗಳಿಗೆ ತೆರಳಿ ಭತ್ತ ಮತ್ತು ಕಬ್ಬಿನ ಬೆಳೆಗಳನ್ನು ತಿಂದು-ತುಳಿದು ಹಾಳು ಮಾಡಿರುವುದಾಗಿ ಚುಂಚವಾಡ ಮತ್ತು ಕರೀಕಟ್ಟಿ ಗ್ರಾಮಗಳ ರೈತರು ತಿಳಿಸಿದ್ದಾರೆ.

ಆನೆ ದಾಳಿಯಿಂದ ಉಂಟಾದ ಬೆಳೆಹಾನಿಗೆ ಸೂಕ್ತ ಪರಿಹಾರ ವಿತರಿಸಬೇಕು ಮತ್ತು ಬೆಳೆ ಹಾಳು ಮಾಡುತ್ತಿರುವ ಆನೆಯನ್ನು ಆದಷ್ಟು ಬೇಗ ಮರಳಿ ಅರಣ್ಯಕ್ಕೆ ಸಾಗಿಸಬೇಕು ಎಂದು ಚುಂಚವಾಡ ಹಾಗೂ ಸುತ್ತಲಿನ ಭಾಗದ ರೈತರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ