ಆ್ಯಪ್ನಗರ

ಪಿಯು ಪರೀಕ್ಷೆ: ಅಥಣಿಯಲ್ಲಿ ಗೊಂದಲ

ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿರುವ ಕೆಎಲ್‌ಇ ಸಂಸ್ಥೆಯ ಸ್ಥಳೀಯ ಎಸ್‌ಎಸ್‌ಎಂಎಸ್‌ ಮಹಾವಿದ್ಯಾಲಯದ ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಗಳನ್ನು ತಪ್ಪಾಗಿ ...

Vijaya Karnataka 2 Mar 2018, 5:00 am

ಅಥಣಿ: ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿರುವ ಕೆಎಲ್‌ಇ ಸಂಸ್ಥೆಯ ಸ್ಥಳೀಯ ಎಸ್‌ಎಸ್‌ಎಂಎಸ್‌ ಮಹಾವಿದ್ಯಾಲಯದ ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಗಳನ್ನು ತಪ್ಪಾಗಿ ಹಾಕಿದ ಪರಿಣಾಮ ಕೆಲ ಕಾಲ ಗೊಂದಲ ಉಂಟಾಯಿತು.

Vijaya Karnataka Web news/belagavi/examination
ಪಿಯು ಪರೀಕ್ಷೆ: ಅಥಣಿಯಲ್ಲಿ ಗೊಂದಲ


ಹೀಗಾಗಿ, ಪರೀಕ್ಷೆ ಸಮಯ ಆರಂಭಗೊಂಡರೂ ವಿದ್ಯಾರ್ಥಿಗಳು ಕೊಠಡಿಗಳನ್ನು ಹುಡುಕುವುದರಲ್ಲಿಯೇ ಪರದಾಡಿದರು. ವಿಷಯ ತಿಳಿದ ಪಾಲಕರು ಮಹಾವಿದ್ಯಾಲಯದ ಹೊರಗೆ ಪ್ರಾಚಾರ್ಯ ಮತ್ತು ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದರು. ಪರೀಕ್ಷಾ ಕೊಠಡಿಗಳ ಬಾಗಿಲುಗಳ ಮೇಲೆ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ಅನುಕ್ರಮವಾಗಿ ನಮೂದಿಸದೇ ಇದ್ದಿದ್ದರಿಂದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಹುಡುಕಲು ಪಡಿಪಾಟಲು ಪಟ್ಟರು. ಪರೀಕ್ಷಾ ಸಮಯ ಆರಂಭಗೊಂಡ ನಂತರ ಸಮಸ್ಯೆ ಬಗೆಹರಿಸಿ ಪರೀಕ್ಷೆ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ