ಬೆಳಗಾವಿ : ಕಾರು ಮಾರಾಟ ಮಾಡುವುದಾಗಿ ಓಎಲ್ಎಕ್ಸ್ ಆ್ಯಪ್ನಲ್ಲಿ ಮಾಹಿತಿ ಬಿಟ್ಟು, ಖರೀದಿಸಲು ಬಂದ ಬೆಂಗಳೂರಿನ ಚೋಳನಾಯಕನಹಳ್ಳಿಯ ವ್ಯಕ್ತಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಉದ್ಯಮಬಾಗ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ 1.80 ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.
ಬಸವರಾಜ ಉರ್ಫ್ ಪುನೀತ ರಾಥೋಡ ಉರ್ಫ್ ಬಸ್ಸು ವಿರೂಪಾಕ್ಷಪ್ಪ ಗೋಕಾವಿ, ಮಂಜುನಾಥ ಉರ್ಫ್ ಮಂಜ್ಯಾ ಉರ್ಫ್ ಮಂಜು ಸಿದ್ದಪ್ಪ ದೊಡ್ಡಮನಿ, ಬಸವರಾಜ ಉರ್ಫ್ ಬಸ್ಯಾ ಉರ್ಫ್ ಬಸ್ಸು ಈರಪ್ಪ ಬೆಳವಡಿ, ಮಡಿವಾಳಪ್ಪ ಉರ್ಫ್ ಮಡಿವಾಳಿ ಪುಂಡಲೀಕ ಗರಗದ ಬಂಧಿತರು. ಇವರೆಲ್ಲರೂ ಧಾರವಾಡ ತಾಲೂಕಿನ ಹೊಸತೇಗೂರು ಗ್ರಾಮದವರಾಗಿದ್ದಾರೆ.
ಆರೋಪಿಗಳು ತಮ್ಮ ಕಾರು ಮಾರುವುದಾಗಿ ಹೇಳಿ ಅದರ ಮಾಹಿತಿಯನ್ನು ಓಎಲ್ಎಕ್ಸ್ ಆ್ಯಪ್ನಲ್ಲಿ ಹಾಕಿದ್ದರು. ಇದನ್ನು ಗಮನಿಸಿ ಖರೀದಿಸಲು ಇಚ್ಛಿಸಿದ ಬೆಂಗಳೂರಿನ ಮಹ್ಮದ್ ಶಹಬಾಜ್ ಅಹ್ಮದ್ ಅವರನ್ನು ಕಳೆದ ಡಿ.1ರಂದು ಬೆಳಗಾವಿಗೆ ಕರೆಸಿಕೊಂಡಿದ್ದರು. ಗ್ರಾಹಕ ಬರುತ್ತಲೇ ಮಾಣಿಕಬಾಗ ಟಾಟಾ ಶೋರೂಮ್ ಹತ್ತಿರದಿಂದ ಇಂಡಿಕಾ ಕಾರಿನಲ್ಲಿ ಬಾಮನವಾಡಿಯ ಕಾಜು ತೋಟಕ್ಕೆ ಕರೆದುಕೊಂಡು ಹೋಗಿ, ಚಾಕು ತೋರಿಸಿ ಹೆದರಿಸಿ ಅವರ ಬಳಿಯಿದ್ದ 2,82,700 ರೂ. ನಗದು, 2 ಮೊಬೈಲ್ ಫೋನ್, 1 ವಾಚು, 1 ಬೆಳ್ಳಿ ಉಂಗುರ ಸುಲಿಗೆ ಮಾಡಿದ್ದರು.
ಈ ಕುರಿತು ಉದ್ಯಮಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ್ದ ಇನ್ಸ್ಪೆಕ್ಟರ್ ಎಸ್.ಸಿ. ಪಾಟೀಲ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಕೆ.ಕೆ. ಸವದತ್ತಿ, ಜಗದೀಶ ಹಾದಿಮನಿ ಮತ್ತು ಅಜಿತ ಶಿಪ್ಪೂರೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಸುಲಿಗೆ ಮಾಡಿದ್ದ ಹಣದಲ್ಲಿ 1.32 ಲಕ್ಷ ರೂ. ನಗದು, ಕೃತ್ಯ ಮಾಡಲು ಉಪಯೋಗಿಸಿದ 40 ಸಾವಿರ ರೂ. ಮೌಲ್ಯದ ಇಂಡಿಕಾ ಕಾರು, 2 ಪರ್ಸ್, 1 ಬೆಳ್ಳಿ ಉಂಗುರ, 1 ಕೈ ಗಡಿಯಾರ ಒಳಗೊಂಡು ಒಟ್ಟು 1.80 ಲಕ್ಷ ರೂ. ಮೌಲ್ಯದ ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಆಯುಕ್ತ ಡಾ. ಡಿ.ಸಿ. ರಾಜಪ್ಪ ಶ್ಲಾಘಿಸಿದ್ದಾರೆ.
ಬಸವರಾಜ ಉರ್ಫ್ ಪುನೀತ ರಾಥೋಡ ಉರ್ಫ್ ಬಸ್ಸು ವಿರೂಪಾಕ್ಷಪ್ಪ ಗೋಕಾವಿ, ಮಂಜುನಾಥ ಉರ್ಫ್ ಮಂಜ್ಯಾ ಉರ್ಫ್ ಮಂಜು ಸಿದ್ದಪ್ಪ ದೊಡ್ಡಮನಿ, ಬಸವರಾಜ ಉರ್ಫ್ ಬಸ್ಯಾ ಉರ್ಫ್ ಬಸ್ಸು ಈರಪ್ಪ ಬೆಳವಡಿ, ಮಡಿವಾಳಪ್ಪ ಉರ್ಫ್ ಮಡಿವಾಳಿ ಪುಂಡಲೀಕ ಗರಗದ ಬಂಧಿತರು. ಇವರೆಲ್ಲರೂ ಧಾರವಾಡ ತಾಲೂಕಿನ ಹೊಸತೇಗೂರು ಗ್ರಾಮದವರಾಗಿದ್ದಾರೆ.
ಆರೋಪಿಗಳು ತಮ್ಮ ಕಾರು ಮಾರುವುದಾಗಿ ಹೇಳಿ ಅದರ ಮಾಹಿತಿಯನ್ನು ಓಎಲ್ಎಕ್ಸ್ ಆ್ಯಪ್ನಲ್ಲಿ ಹಾಕಿದ್ದರು. ಇದನ್ನು ಗಮನಿಸಿ ಖರೀದಿಸಲು ಇಚ್ಛಿಸಿದ ಬೆಂಗಳೂರಿನ ಮಹ್ಮದ್ ಶಹಬಾಜ್ ಅಹ್ಮದ್ ಅವರನ್ನು ಕಳೆದ ಡಿ.1ರಂದು ಬೆಳಗಾವಿಗೆ ಕರೆಸಿಕೊಂಡಿದ್ದರು. ಗ್ರಾಹಕ ಬರುತ್ತಲೇ ಮಾಣಿಕಬಾಗ ಟಾಟಾ ಶೋರೂಮ್ ಹತ್ತಿರದಿಂದ ಇಂಡಿಕಾ ಕಾರಿನಲ್ಲಿ ಬಾಮನವಾಡಿಯ ಕಾಜು ತೋಟಕ್ಕೆ ಕರೆದುಕೊಂಡು ಹೋಗಿ, ಚಾಕು ತೋರಿಸಿ ಹೆದರಿಸಿ ಅವರ ಬಳಿಯಿದ್ದ 2,82,700 ರೂ. ನಗದು, 2 ಮೊಬೈಲ್ ಫೋನ್, 1 ವಾಚು, 1 ಬೆಳ್ಳಿ ಉಂಗುರ ಸುಲಿಗೆ ಮಾಡಿದ್ದರು.
ಈ ಕುರಿತು ಉದ್ಯಮಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ್ದ ಇನ್ಸ್ಪೆಕ್ಟರ್ ಎಸ್.ಸಿ. ಪಾಟೀಲ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಕೆ.ಕೆ. ಸವದತ್ತಿ, ಜಗದೀಶ ಹಾದಿಮನಿ ಮತ್ತು ಅಜಿತ ಶಿಪ್ಪೂರೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಸುಲಿಗೆ ಮಾಡಿದ್ದ ಹಣದಲ್ಲಿ 1.32 ಲಕ್ಷ ರೂ. ನಗದು, ಕೃತ್ಯ ಮಾಡಲು ಉಪಯೋಗಿಸಿದ 40 ಸಾವಿರ ರೂ. ಮೌಲ್ಯದ ಇಂಡಿಕಾ ಕಾರು, 2 ಪರ್ಸ್, 1 ಬೆಳ್ಳಿ ಉಂಗುರ, 1 ಕೈ ಗಡಿಯಾರ ಒಳಗೊಂಡು ಒಟ್ಟು 1.80 ಲಕ್ಷ ರೂ. ಮೌಲ್ಯದ ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಆಯುಕ್ತ ಡಾ. ಡಿ.ಸಿ. ರಾಜಪ್ಪ ಶ್ಲಾಘಿಸಿದ್ದಾರೆ.