ಆ್ಯಪ್ನಗರ

ಶಾಸಕರಿಂದ ಸುಳ್ಳು ಮಾಹಿತಿ: ಬಿಜೆಪಿ ಆರೋಪ

ಖಾನಾಪುರ: ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರು ...

Vijaya Karnataka 9 Jun 2019, 5:00 am
ಖಾನಾಪುರ: ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾದ ಅನುದಾನದ ಬಗ್ಗೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಬಾಬುರಾವ್‌ ದೇಸಾಯಿ ಆರೋಪಿಸಿದರು.
Vijaya Karnataka Web false information from mlas bjp accused
ಶಾಸಕರಿಂದ ಸುಳ್ಳು ಮಾಹಿತಿ: ಬಿಜೆಪಿ ಆರೋಪ


ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕಿನ 6 ಜಿಪಂ ಕ್ಷೇತ್ರಗಳಲ್ಲಿ ಜಿಪಂ ವತಿಯಿಂದ ಮಂಜೂರಾದ ಅನುದಾನವನ್ನೂ ತಮ್ಮ ಅನುದಾನವೆಂದು ಶಾಸಕರು ಬಿಂಬಿಸುತ್ತಿದ್ದಾರೆ. ತಮ್ಮ ಶಾಸಕತ್ವದ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸರಕಾರದಿಂದ 300 ಕೋಟಿ ರೂ. ಅನುದಾನ ಮಂಜೂರು ಮಾಡಿಸಿಕೊಂಡು ಬಂದಿರುವುದಾಗಿ ಹೇಳುತ್ತಿದ್ದಾರೆ. ಆದರೆ, 300 ಕೋಟಿ ರೂ.ಗಳ ಕಾಮಗಾರಿಗಳು ಎಲ್ಲಿ ನಡೆದಿವೆ ಎಂಬುದನ್ನು ಶಾಸಕರು ತಾಲೂಕಿನ ಜನರಿಗೆ ತೋರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷ ದ ಬ್ಲಾಕ್‌ ಅಧ್ಯಕ್ಷ ವಿಠಲ ಪಾಟೀಲ, ಮುಖಂಡರಾದ ಶರದ್‌ ಕೇಶಕಾಮತ, ಜ್ಯೋತಿಬಾ ರೇಮಾಣಿ, ಕಿರಣ ಯಳ್ಳೂರಕರ, ಧನಶ್ರೀ ಸರ್‌ದೇಸಾಯಿ, ಸಂಜಯ ಕುಬಲ, ಸುರೇಶ ದೇಸಾಯಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ