ಕಾಗವಾಡ: ಉಗಾರ ಬದ್ರುಕ ಗ್ರಾಮದಲ್ಲಿ ಸಾಲಬಾಧೆ ತಾಳದೆ ರೈತರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಕಂದರ್ ಅಬ್ದುಲ್ ಚೌಧರಿ(56) ಮೃತರು. ಇವರು 2.7 ಎಕರೆ ಕೃಷಿ ಭೂಮಿ ಹೊಂದಿದ್ದು, ಗ್ರಾಮದ ಎಸ್ಬಿಐನಲ್ಲಿ 1.80 ಲಕ್ಷ ರೂ. ಮತ್ತು ಪಿಕೆಪಿಎಸ್ನಲ್ಲಿ 40 ಸಾವಿರ ರೂ. ಸಾಲ ಪಡೆದಿದ್ದರು. ಸಿಕಂದರ್ ಅವರಿಗೆ ಹೃದಯ ಕಾಯಿಲೆ ಇದ್ದಿದ್ದರಿಂದ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಆರ್ಥಿಕ ಹೊರೆಯಿಂದ ಸಾಲದ ಕಂತುಗಳನ್ನು ಕಟ್ಟಲಾಗದ್ದರಿಂದ ಅವರು ಗುರುವಾರ ಮಧ್ಯಾಹ್ನ ತೋಟದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ ಇದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲಬಾಧೆ: ರೈತ ಆತ್ಮಹತ್ಯೆ
ಉಗಾರ ಬದ್ರುಕ ಗ್ರಾಮದಲ್ಲಿ ಸಾಲಬಾಧೆ ತಾಳದೆ ರೈತರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಸಿಕಂದರ್ ಅಬ್ದುಲ್ ಚೌಧರಿ(56) ಮೃತರು ಇವರು 2...
Vijaya Karnataka 18 May 2018, 5:00 am