ಆ್ಯಪ್ನಗರ

ಸಾಲಬಾಧೆ ತಾಳದೆ ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದ ರೈತ ಆತ್ಮಹತ್ಯೆ

ಅಥಣಿ(ಬೆಳಗಾವಿ): ತಾಲೂಕಿನ ಕೊಡಗಾನೂರ ಗ್ರಾಮದ ರೈತ ...

Vijaya Karnataka 27 Jun 2020, 5:00 am
ಅಥಣಿ(ಬೆಳಗಾವಿ): ತಾಲೂಕಿನ ಕೊಡಗಾನೂರ ಗ್ರಾಮದ ರೈತ ಹಸನಸಾಬ್‌ ವಜೀರಸಾಬ ಪಠಾಣ(35) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಕೃಷಿ ಚಟುವಟಿಕೆಗಳಿಗೆ ಹಾಗೂ ಸರಕು ವಾಹನಗಳಿಗೆ ಬ್ಯಾಂಕ್‌ ಮತ್ತು ಕೈಗಡ ಸೇರಿ ಸುಮಾರು 10 ಲಕ್ಷ ರೂ. ಸಾಲ ಮಾಡಿದ್ದರು. ಅಲ್ಲದೆ, ಇವರಿಗೆ ಖಾಸಗಿ ಸಕ್ಕರೆ ಕಾರ್ಖಾನೆಯೊಂದರಿಂದ ವಾಹನಗಳ ಬಾಡಿಗೆಯಾಗಿ ಲಕ್ಷಾಂತರ ರೂ. ಬರಬೇಕಿತ್ತು. ಬಾಕಿ ಹಣ ಪಾವತಿ ವಿಳಂಬ ಹಾಗೂ ಸಾಲಗಾರರ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಹೋದರರು ಐಗಳಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಿಸಿದ್ದಾರೆ.
Vijaya Karnataka Web 26-ATHANI-1 (HASNSAB PATHAN)_53
ಹಸನಸಾಬ್‌ ಪಠಾಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ