ಆ್ಯಪ್ನಗರ

ಹಕ್ಕುಗಳಿಗಾಗಿ ರೈತ ಸಮುದಾಯ ಒಗ್ಗಟ್ಟಾಗಲಿ: ಹಳ್ಳೂರ

ಅಡಹಳ್ಳಿ: ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡಲು ಹಾಗೂ ಸಮಗ್ರ ನೀರಾವರಿ ಕಲ್ಪಿಸಲು ಕೇಂದ್ರ, ರಾಜ್ಯ ಸರಕಾರಗಳೆರಡೂ ವಿಫಲವಾಗಿವೆ...

Vijaya Karnataka 7 Feb 2019, 5:00 am
ಅಡಹಳ್ಳಿ : ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡಲು ಹಾಗೂ ಸಮಗ್ರ ನೀರಾವರಿ ಕಲ್ಪಿಸಲು ಕೇಂದ್ರ, ರಾಜ್ಯ ಸರಕಾರಗಳೆರಡೂ ವಿಫಲವಾಗಿವೆ. ರೈತರು ತಮ್ಮ ಹಕ್ಕುಗಳನ್ನು ಪಡೆಯಲು ಒಗ್ಗಟ್ಟಾಗಿ ಆಡಳಿತ ವರ್ಗಕ್ಕೆ ಬುದ್ಧಿ ಕಲಿಸಬೇಕು ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎ.ಬಿ. ಹಳ್ಳೂರ ಹೇಳಿದರು.
Vijaya Karnataka Web farmer community to be united for rights says hallur
ಹಕ್ಕುಗಳಿಗಾಗಿ ರೈತ ಸಮುದಾಯ ಒಗ್ಗಟ್ಟಾಗಲಿ: ಹಳ್ಳೂರ


ಅವರು ಗ್ರಾಮದ ಹನುಮ ದೇವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ರೈತ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೇಂದ್ರ ಸರಕಾರವು ಬಜೆಟ್‌ನಲ್ಲಿ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡುವುದಾಗಿ ಹೇಳಿ ರೈತರಿಗೆ ಕನಿಷ್ಠ ಮೌಲ್ಯ ನಿಗದಿಮಾಡಿ ಅವಮಾನಿಸಿದೆ. ಕುಮಾರಸ್ವಾಮಿಯವರು ಸಾಲಮನ್ನಾದ ನಾಟಕವಾಡುತ್ತಾ ಹಲವು ನಿಬಂಧನೆಗಳನ್ನು ಹೇರಿ ರೈತರಿಗೆ ಯೋಜನೆಯ ಲಾಭ ಸಿಗದಂತೆ ಮಾಡಿದ್ದಾರೆ ಎಂದು ದೂರಿದರು.

ತಾಲೂಕು ರೈತಸಂಘ ಅಧ್ಯಕ್ಷ ರಾವಸಾಬ ಜಗತಾಪ ಮಾತನಾಡಿ, ಇಸ್ರೇಲ್‌ ದೇಶದ ನೀತಿಯಂತೆ ರೈತರು ಯಾವ ಬೆಳೆಯನ್ನು ಬೆಳೆಯಬೇಕೆಂದು ಸರಕಾರ ನಿರ್ಧರಿಸಬೇಕು. ಅಂದಾಗ ಮಾತ್ರ ರೈತನಿಗೆ ಬೆಲೆ ಸಮರ ಹೊಯ್ದಾಟದ ಅಂಜಿಕೆಯಿರುವುದಿಲ್ಲ. ಬರ, ನೆರೆಯ ಹೊಡೆತಕ್ಕೆ ಸಿಲುಕಿ ನಲುಗಿ ಸಾಲದ ಸುಳಿಯಲ್ಲಿ ಮುಳುಗಿರುವ ರೈತನಿಗೆ ಸಂಪೂರ್ಣ ಸಾಲ ಮನ್ನಾ ಮಾಡಿದರೆ ನಿಜವಾಗಿ ಅನ್ನದಾತನ ಖುಣ ತೀರಿಸಿದಂತಾಗುತ್ತದೆ ಎಂದರು.

ಹಿರಿಯ ರೈತ ಮುಖಂಡ ಅಡಿವೆಪ್ಪಾ ಕೆಂಚಣ್ಣವರ ಅಧ್ಯಕ್ಷ ತೆ ವಹಿಸಿ, ರೈತ ಸಂಘ ಸಾಗಿ ಬಂದ ದಾರಿ, ಧ್ಯೇಯೋದ್ದೇಶ, ಹೋರಾಟದ ವಿವರಗಳನ್ನು ನೀಡಿದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಈರಗೌಡ ಪಾಟೀಲ, ತಾಲೂಕು ರೈತ ಸಂಘದ ಮಾಜಿ ಅಧ್ಯಕ್ಷ ಎಂ.ಸಿ. ತಾಂಬೋಳಿ ಮಾತನಾಡಿದರು.

ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಸನದಿ, ಬಸಪ್ಪ ಕೋಹಳ್ಳಿ, ಹುಸೇನ್‌ ಅವಟಿ, ಶಂಕರ ಹಿಪ್ಪರಗಿ, ಬಸಪ್ಪ ಸಾತಣ್ಣವರ, ಶ್ರೀಕಾಂತ ಪತ್ತಾರ, ಲಕ್ಷ ್ಮಣ ಸಾತಣ್ಣವರ, ಸಿದ್ಧಾರ್ಥ ಪಾಟೀಲ, ಅಶೋಕ ಹಟಗಾರ, ಅಣದ್ಣಪ್ಪಾ ಹಾಲಳ್ಳಿ ಮತ್ತಿತರರು ಇದ್ದರು. ಪ್ರಕಾಶ ಪೂಜಾರಿ ಸ್ವಾಗತಿಸಿದರು. ಅಪ್ಪು ಗುಡದಿನ್ನಿ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ