ಆ್ಯಪ್ನಗರ

ವಿದ್ಯುತ್‌ ತಗುಲಿ ರೈತ ಸಾವು

ತಾಲೂಕಿನ ಕರಂಬಳ ಗ್ರಾಮದ ಮಲಪ್ರಭಾ ನದಿ ತೀರದ ರೈತರೋರ್ವರು ಕೃಷಿ ಜಮೀನಿನಲ್ಲಿ ಮೋಟರ್‌ ಶುರು ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿದ್ದಾರೆ...

Vijaya Karnataka 12 Mar 2019, 5:00 am
ಖಾನಾಪುರ: ತಾಲೂಕಿನ ಕರಂಬಳ ಗ್ರಾಮದ ಮಲಪ್ರಭಾ ನದಿ ತೀರದ ರೈತರೋರ್ವರು ಕೃಷಿ ಜಮೀನಿನಲ್ಲಿ ಮೋಟರ್‌ ಶುರು ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿದ್ದಾರೆ.
Vijaya Karnataka Web farmer dies by electrocution
ವಿದ್ಯುತ್‌ ತಗುಲಿ ರೈತ ಸಾವು


ಖಾನಾಪುರ ಪಿಕೆಪಿಎಸ್‌ ಮಾಜಿ ಅಧ್ಯಕ್ಷ ರಾಜಾರಾಮ ರಾಮಚಂದ್ರ ಪಾಟೀಲ(56) ಮೃತ ರೈತ. ಸೋಮವಾರ ಬೆಳಗ್ಗೆ ಹೊಲದಲ್ಲಿರುವ ಮೋಟರ್‌ ಶುರು ಮಾಡಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ತೆರಳಿದ್ದ ಅವರು ಮಧ್ಯಾಹ್ನವಾದರೂ ಮರಳಿ ಬಾರದಿದ್ದರಿಂದ ಅವರ ಕುಟುಂಬದ ಸದಸ್ಯರು ಹೊಲಕ್ಕೆ ಹೋಗಿ ನೋಡಿದಾಗ ರಾಜಾರಾಮ ಅವರು ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿರುವುದು ಗೊತ್ತಾಗಿದೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ