ಆ್ಯಪ್ನಗರ

ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

ರೈತ ಮಹಾದೇವಪ್ಪ ಬಾಳಪ್ಪ ಬಿರ್ಜಿ(62) ಸಾಲಬಾಧೆ ತಾಳದೇ ಶುಕ್ರವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ...

Vijaya Karnataka 29 Sep 2018, 5:00 am
ಯರಗಟ್ಟಿ: ಸ್ಥಳೀಯ ರೈತ ಮಹಾದೇವಪ್ಪ ಬಾಳಪ್ಪ ಬಿರ್ಜಿ(62) ಸಾಲಬಾಧೆ ತಾಳದೇ ಶುಕ್ರವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web BEL-28YGTPHOTO1


ಇತ್ತೀಚೆಗೆ ತಮ್ಮ ಜಮೀನಿನಲ್ಲಿ ಮಹಾದೇವಪ್ಪ ಎರಡು ಕೊಳವೆ ಬಾವಿಗಳನ್ನು ಕೊರೆಸಿದ್ದರು. ಒಂದು ನೀರಿಲ್ಲದೆ ಬತ್ತಿ ಹೋಗಿತ್ತು. ಮತ್ತೊಂದು ಕೊಳವೆ ಬಾವಿ ಕೊರೆಸಿದ್ದರೂ ನೀರು ಬಂದಿರಲಿಲ್ಲ. ಕೊಳವೆ ಬಾವಿ ಕೊರೆಸಲು ಸ್ಥಳಿಯ ಅಜಾದ್‌ ಕೋ - ಆಪ್‌ ಬ್ಯಾಂಕ್‌ನಲ್ಲಿ ಐವತ್ತು ಸಾವಿರ, ಧರ್ಮಸ್ಥಳ ಸಂಘದಲ್ಲಿ ಐವತ್ತು ಸಾವಿರ, ಪಿಕೆಪಿಎಸ್‌ನಲ್ಲಿ ಮೂವತ್ತು ಸಾವಿರ, ಗ್ರಾಮದಲ್ಲಿ ಕೈಗಡ ರೂಪದಲ್ಲಿ ನಾಲ್ಕು ಲಕ್ಷ ರೂ. ಸಾಲ ಮಾಡಿದ್ದರು.

ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಹೊಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಆದರೆ ಸತ್ತಿಗೇರಿ ರಸ್ತೆಯ ಪಕ್ಕದ ಜಮೀನಿನಲ್ಲಿ ಮನನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುರಗೋಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ