ಆ್ಯಪ್ನಗರ

ರೈತರಿಗಾಗಿ ಫಾರ್ಮರ್‌ ಕಂಪನಿ ಆರಂಭಿಸಲು ಪ್ರಯತ್ನ

ಚಿಕ್ಕೋಡಿ: ಒಣ ಬೇಸಾಯ ಮಾಡುವ ರೈತರು ರಾಜ್ಯ ಸರಕಾರದ ಶೇ...

Vijaya Karnataka 29 Nov 2018, 5:00 am
ಚಿಕ್ಕೋಡಿ : ಒಣ ಬೇಸಾಯ ಮಾಡುವ ರೈತರು ರಾಜ್ಯ ಸರಕಾರದ ಶೇ.90ರಷ್ಟು ಸಬ್ಸಿಡಿಯಿಂದ ಹನಿ ನೀರಾವರಿ ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಪಡೆಯಬೇಕು ಎಂದು ಉಪಕೃಷಿ ನಿರ್ದೇಶಕ ಎಚ್‌.ಡಿ. ಕೋಳೆಕರ ಸಲಹೆ ನೀಡಿದರು.
Vijaya Karnataka Web BEL-28CKD1


ಅವರು ತಾಲೂಕಿನ ಉಮರಾಣಿ ಗ್ರಾಮದ ಹೊನಗುಡ್ಡ ಲಕ್ಷ್ಮೀ ದೇವಸ್ಥಾನದಲ್ಲಿ ಬುಧವಾರ ಕೃಷಿ ಇಲಾಖೆ 2018-19ನೇ ಸಾಲಿನ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಯೋಜನೆಯಡಿ ಸಮಗ್ರ ಕೃಷಿ ಪದ್ಧತಿ ಕುರಿತು ರೈತರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಭಾಗದ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಲು ಒಂದು ಫಾರ್ಮರ್‌ ಕಂಪನಿ ತೆರೆಯಲು ಪ್ರಯತ್ನಿಸಲಾಗುವುದು ಎಂದರು.

ಬೇಡಕಿಹಾಳದ ಪ್ರಗತಿಪರ ರೈತ ಸುರೇಶ ದೇಸಾಯಿ ಮಾತನಾಡಿ, ಕೃಷಿಯಲ್ಲಿ ನೀರಿಗಿಂತ ಬಿಸಿಲು, ಗಾಳಿ ಮುಖ್ಯ. ತಾಂತ್ರಿಕತೆ ಕೊಟ್ಟರೆ ನೀರಾವರಿ ಭಾಗದ ರೈತರಿಗಿಂತ ಒಣಬೇಸಾಯ ರೈತರೇ ಮುಂದೆ ಬರುತ್ತಾರೆ. ನೀರಾವರಿ ಭಾಗದ ರೈತರು ನೀರು ಇದೆ ಎಂದು ಬೆಳೆಗಳಿಗೆ ಸಿಕ್ಕಾಪಟ್ಟೆ ನೀರು ಹಾಯಿಸಿ ಭೂಮಿಯ ಫಲವತ್ತತೆ ನಾಶ ಮಾಡಿ ಭೂಮಿಯನ್ನು ಸವಳು ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತ ಪಡಿಸಿದರು.

ಇಂದು ರೈತರು ಆರ್ಥಿಕವಾಗಿ ಮುಂದೆ ಬರಬೇಕು ಎಂದರೆ ಕೇವಲ ಒಂದೆ ಬೆಳೆ ನಂಬಿ ಕೂತರೆ ಸಾಲದು. ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಹಸಿರೆಲೆ ಗೊಬ್ಬರ ಬಳಸಬೇಕು. ಹೆಚ್ಚಿನ ಇಳುವರಿ ಪಡೆಯಬೇಕು ಎಂದರೆ ಜೋಳ, ಭತ್ತ, ಗೋಧಿ, ಶೇಂಗಾ, ಹೆಸರು, ಉದ್ದು, ತೊಗರಿ ಬೆಳೆಯನ್ನು ಬಿತ್ತಿದ 20 ದಿನಗಳ ನಂತರ ಕುಡಿ ಚಿವಟಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಮಾಂಜ್ರೆ ಅಧ್ಯಕ್ಷ ತೆ ವಹಿಸಿದ್ದರು.

ಹುಕ್ಕೇರಿ ಮುಖ್ಯ ಪಶುವೈದ್ಯಾಧಿಕಾರಿ ಸುರೇಶ ಅಂಗಡಿ, ಆದರ್ಶ ಗೌಡರ, ಎಸ್‌.ಬಿ.ಧರಣಿ, ಎಂ.ಎನ್‌.ಮಲೋಡೆ, ಮುರಗೆಪ್ಪಾ ಅಡಿಸೇರಿ, ಅರ್ಜುನ ಕಮತೆ, ರಾಜು ಕುಲ್ಲೊಳಿ, ರಾಮಪ್ಪ ಹಾಲಟ್ಟಿ, ಲಕ್ಷ ್ಮಣ ಪೂಜೇರಿ, ಚನ್ನಪ್ಪಾ ಡಬ್ಬನ್ನವರ, ಕಲಗೌಡ ಪಾಟೀಲ, ಕುಮಾರ ಮಾಂಜ್ರೆ, ಸಹಾಯಕ ಕೃಷಿ ನಿರ್ದೇಶಕರಾದ ಎಸ್‌.ಎಸ್‌.ಜಾತಗಾರ ಮತ್ತಿತರರು ಉಪಸ್ಥಿತರಿದ್ದರು.

ರಾಘವೇಂದ್ರ ಬೊಮ್ಮಿಗಟ್ಟಿ ಸ್ವಾಗತಿಸಿದರು. ಎಸ್‌.ಎಸ್‌.ಜಾತಗಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ