ಆ್ಯಪ್ನಗರ

ಕಬ್ಬು ಸಾಗಾಟದ ಟ್ರ್ಯಾಕ್ಟರ್‌ಗಳ ಟಾಯರ್‌ ಒಡೆದ ರೈತರು

ಕಾಗವಾಡ: ಕಬ್ಬಿಗೆ ಪ್ರತಿ ಟನ್‌ಗೆ 2900 ದರ ನೀಡಲೇಬೇಕೆಂಬ ಬೇಡಿಕೆ ಮುಂದಿಟ್ಟು ಉಗಾರ ಕಬ್ಬು ಬೆಳೆಗಾರರ ಸಂಘದಿಂದ ...

Vijaya Karnataka 31 Oct 2018, 5:00 am
ಕಾಗವಾಡ : ಕಬ್ಬಿಗೆ ಪ್ರತಿ ಟನ್‌ಗೆ 2900 ದರ ನೀಡಲೇಬೇಕೆಂಬ ಬೇಡಿಕೆ ಮುಂದಿಟ್ಟು ಉಗಾರ ಕಬ್ಬು ಬೆಳೆಗಾರರ ಸಂಘದಿಂದ ಯಾವುದೇ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಾಟ ಮಾಡಬಾರದು ಎಂಬ ಸಂದೇಶ ನೀಡಿದಾಗಲೂ ಸೋಮವಾರ ರಾತ್ರಿ ಕೆಲ ರೈತರು ಅಥಣಿ-ಕಾಗವಾಡ, ಉಗಾರ-ಕಾಗವಾಡ ಮಾರ್ಗದಿಂದ ಕಬ್ಬು ಸಾಗಾಟ ಮಾಡುತ್ತಿದ್ದುದನ್ನು ವಿರೋಧಿಸಿದ ಕೆಲ ರೈತರು ಟ್ರ್ಯಾಕ್ಟರ್‌ಗಳ ಕೆಲ ಟ್ರಾಲಿಗಳ ಟಾಯರ್‌ಗಳನ್ನು ಕುಡುಗೋಲಿನಿಂದ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web BEL-30 KAGWAD 2 B NEWS PHOTO


ಸೋಮವಾರ ತಡರಾತ್ರಿ ಟ್ರ್ಯಾಕ್ಟರ್‌ಗಳಿಂದ ಕಬ್ಬು ತಗೆದುಕೊಂಡು ಹೋಗುತ್ತಿರುವ ಬಗ್ಗೆ ಕೆಲ ರೈತ ಹೋರಾಟಗಾರರಿಗೆ ಮಾಹಿತಿ ಲಭ್ಯವಾಗಿದ್ದರಿಂದ ಶೇಡಬಾಳ ಸ್ಟೇಶನ್‌ ಗ್ರಾಮದ ಹತ್ತಿರ ಟ್ರ್ಯಾಕ್ಟರ್‌ಗಳನ್ನು ತಡೆಯಲಾಯಿತು. ಅವರ ಹತ್ತಿರ ಇರುವ ಕಬ್ಬು ಕಟಾವಣಿಗಾಗಿ ಬಳಸುವ ಕುಡುಗೋಲಿನಿಂದ ಹೊಸ ಟಾಯರ್‌ಗಳು ಒಡೆದು ಹಾಕಲಾಯಿತು.

ಉಗಾರ ಬುದ್ರುಕ ಗ್ರಾಮದಲ್ಲಿ ಉಗಾರ ಕಬ್ಬು ಬೆಳೆಗಾರ ಸಂಘದ ಯುವ ಧುರೀಣ ಶೀತಲ ಪಾಟೀಲ, ರಾಹುಲ್‌ ಶಹಾ, ಅಣ್ಣಾಸಾಹೇಬ ನಂದಗಾಂವೆ, ಅಪ್ಪಾಸಾಹೇಬ ಚೌಗುಲೆ ಸೇರಿದಂತೆ ಯುವ ರೈತರು ಮುಂದಾಗಿ ಉಗಾರ ಸಕ್ಕರೆ ಕಾರ್ಖಾನೆಯ ಶಾಖಾ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.ಪ್ರಸಕ್ತ ಹಂಗಾಮಿನ ದರ ಘೋಷಣೆ ಮಾಡುವರೆಗೆ ಕಾರ್ಖಾನೆ ಪ್ರಾರಂಭಿಸಲು ಬಿಡುವುದಿಲ್ಲ ಎಂದು ಶೀತಲ ಪಾಟೀಲ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ