ಆ್ಯಪ್ನಗರ

ನಾಳೆ ಡಿಸಿ ಕಚೇರಿ ಎದುರು ಪ್ರತಿಭಟಿಸಲು ರೈತರ ನಿರ್ಧಾರ

ಮುಗಳಖೋಡ: ರಾಯಬಾಗ ತಾಲೂಕಿನ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ...

Vijaya Karnataka 19 May 2019, 5:00 am
ಮುಗಳಖೋಡ : ರಾಯಬಾಗ ತಾಲೂಕಿನ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಭೆ ನಡೆಸಿದ ರೈತ ಮುಖಂಡರು ಗುರುವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನಿರ್ಧರಿಸಿದರು.
Vijaya Karnataka Web BLG-1805-2-52-18 MGKD 1


ಕಳೆದ ಮೇ 14 ರಂದು ಘಟಪ್ರಭಾ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಆಗ್ರಹಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದ ರೈತರು ಹಿಡಕಲ್ಲ ಜಲಾಶಯದಿಂದ ನದಿಗೆ 2 ಟಿಎಂಸಿ ನೀರು ಬಿಡಲು ಸರಕಾರ ಆದೇಶಿಸಿದೆ. ಆದರೆ ಎಡದಂಡೆ ಕಾಲುವೆಗೆ 1 ಟಿಎಂಸಿ ನೀರು ಹರಿಸಬೆಕೇಂದು ಬೇಡಿಕೆಯನ್ನು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ನಂತರ ನೀರಾವರಿ ನಿಗಮದ ಅಧಿಕಾರಿ ಕಲ್ಲಪ್ಪ ಕೊಣ್ಣೂರಕರ, ಕಾಲುವೆಗೆ ನೀರು ಹರಿಸುವುದು ನಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದರು. ಆದ್ದರಿಂದ ಗೋಕಾಕ, ಮೂಡಲಗಿ, ರಾಯಬಾಗ, ಮುಧೋಳ, ಜಮಖಂಡಿ ಭಾಗದಲ್ಲಿ ನೀರಿನ ಅಭಾವ ಹೆಚ್ಚಾಗಿರುವುದರಿಂದ ಮೇ 20 ರಂದು ಬೆಳಗಾವಿ ಜಿಲ್ಲಾ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ಈ ಸಂಧರ್ಭದಲ್ಲಿ ಲಕ್ಕಣ್ಣ ಖನದಾಳೆ,ಕಲ್ಯಾಣಿ ಮಗದುಮ್‌, ಜ್ಞಾನೇಶ ಅಳಗವಾಡಿ, ಯಲ್ಲಪ್ಪ ಪಾಟೀಲ, ಕಲ್ಲನಗೌಡ ಪಾಟೀಲ, ಮಹಾದೇವ ಎಬರಟ್ಟಿ, ರಮೇಶ ಕಲ್ಲಾರ, ನಿಂಗಪ್ಪ ಪಕಾಂಡೆ, ರಾಮಣ್ಣ ಬಳೆಗಾರ, ಅಜ್ಜಪ್ಪಗೌಡ ಪಾಟೀಲ, ಅಪ್ಪಾಸಾಬ ಅಂಕಲಿ, ಸುಭಾಷ ಬೆಟಗೇರಿ, ಶಿಕಂದರ ಶಿಲ್ಲೇದಾರ, ಮಹಾಂತೇಶ ಬೆನ್ನಳ್ಳಿ, ಸಚಿನ್‌ ಹುಣಸಿಕಟ್ಟಿ, ಸಂತೋಷ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ