ಆ್ಯಪ್ನಗರ

ಹಗಲಿನಲ್ಲಿ ವಿದ್ಯುತ್‌ ಪೂರೈಸುವಂತೆ ರೈತರ ಆಗ್ರಹ

ಹಿರೇಬಾಗೇವಾಡಿ: ರೈತರಿಗೆ ಹೊಲಗಳಿಗೆ ರಾತ್ರಿ ಬದಲು ಹಗಲಿನಲ್ಲಿ ...

Vijaya Karnataka 17 Dec 2019, 5:00 am
ಹಿರೇಬಾಗೇವಾಡಿ: ರೈತರಿಗೆ ಹೊಲಗಳಿಗೆ ರಾತ್ರಿ ಬದಲು ಹಗಲಿನಲ್ಲಿವಿದ್ಯುತ್‌ ಪೂರೈಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಬೆಳಗಾವಿ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಸೋಮವಾರ ಹಿರೇಬಾಗೇವಾಡಿ ಹೆಸ್ಕಾಂ ಕಚೇರಿ ಶಾಖಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web farmers demand electricity during the day
ಹಗಲಿನಲ್ಲಿ ವಿದ್ಯುತ್‌ ಪೂರೈಸುವಂತೆ ರೈತರ ಆಗ್ರಹ


ರಾತ್ರಿ ವೇಳೆ ವಿದ್ಯುತ್‌ ನೀಡುತ್ತಿರುವುದರಿಂದ ರೈತರ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತಿವೆ. ಆದ್ದರಿಂದ ಹಗಲಿನಲ್ಲಿ10 ಗಂಟೆಗೆ ಕಾಲ ವಿದ್ಯುತ್‌ ಪೂರೈಸಬೇಕು. ಇಲ್ಲಿದಿದ್ದಲ್ಲಿಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿ ಮೂಲಕ ಎಚ್ಚರಿಕೆ ನೀಡಿದ್ದಾರೆ.

ರೈತ ಸಂಘದ ತಾಲೂಕು ಉಪಾಧ್ಯಕ್ಷ ಬಸವರಾಜ ಡೊಂಗರಗಾವಿ ಮಾತನಾಡಿ. ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು. ಟಿಸಿಗಳು ಕೆಟ್ಟಾಗ ತಕ್ಷಣ ದುರಸ್ತಿಗೆ ಮಾಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಹೆಸ್ಕಾಂ ಶಾಖಾಧಿಕಾರಿ ರಾಘವೇಂದ್ರ ಹುಟಗಿ, ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ಭರವಸೆ ನೀಡಿದರು.

ಆನಂದ ನಂದಿ, ಶಿವು ಕಂಬಿ, ರುದ್ರಪ್ಪ ನೀರಲಗಿ, ಸಿದ್ದನಗೌಡ ಪಾಟೀಲ, ಸೋಮಪ್ಪ ಕುಂಬಾರ, ಶಿವು ದೇಸನೂರ, ಈರಯ್ಯ ಗಿರಿಮಲ್ಲನ್ನವರ ಸೇರಿದಂದೆ ಕೆ.ಕೆ. ಕೊಪ್ಪ, ಹಾಲಗಿ ಮರ್ಡಿ, ಹಿರೇಬಾಗೇವಾಡಿ, ಕಲಾರಕೊಪ್ಪ, ಅರಳೀಕಟ್ಟಿ, ಬಸ್ಸಾಪೂರ, ಮುತ್ನಾಳ, ಭೆಂಡಿಗೇರಿ, ಗಜಪತಿ, ಕುಕಡೊಳ್ಳಿ, ಬಡಸ ಅಂಕಲಗಿ, ಹುಲಿಕವಿ, ನಾಗೇರಹಾಳ, ನಾಗೇನಟ್ಟಿ ನಂದಿಹಳ್ಳಿ ಗ್ರಾಮಗಳ ರೈತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ