ಆ್ಯಪ್ನಗರ

ಸಿಎಂ ಕಾರ್ಯಕ್ರಮಕ್ಕೆ ಬಂದ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಗೆ ರೈತರಿಂದ ಘೇರಾವ್

ಸಿಎಂ ಯಡಿಯೂರಪ್ಪ ಜತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಗೆ ಬೆಳಗಾವಿ ರೈತರು ಘೇರಾವ್ ಹಾಕಿದ್ದಾರೆ. ಆಗ ಊರು ಬಿಟ್ಟು ಹೋಗಿ ಇಗ್ಯಾಕೆ ನೀವು ಬಂದಿದ್ದೀರಿ. ವಿಶ್ವಾವಿಟ್ಟು ಆರಿಸಿ ಕಳಿಸಿದ್ವಿ ಸ್ವಾಮಿ ಎಂದು ತರಾಟೆಗೆತ್ತಿಕೊಂಡಿದ್ದಾರೆ.

Vijaya Karnataka Web 4 Oct 2019, 2:51 pm
ಬೆಳಗಾವಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಕಾಗವಾಡ ಕ್ಷೇತ್ರದ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ಬೆಳಗಾವಿ ರೈತರು ಘೇರಾವ್ ಹಾಕಿದ ಘಟನೆ ಗುರುವಾರ ನಡೆದಿದೆ.
Vijaya Karnataka Web sm parihara sabe


ನೆರೆಪೀಡಿತ ಬೆಳಗಾವಿ ಜಿಲ್ಲೆಯಲ್ಲಿ ಸಿಎಂ ಯಡಿಯೂರಪ್ಪ ಪ್ರವಾಸದಲ್ಲಿದ್ದು, ದರೂರು ಗ್ರಾಮದಲ್ಲಿ ಪರಿಹಾರ ವಿತರಣೆ ಹಾಗೂ ಅಹವಾಲು ಸ್ವೀಕಾರ ಸಭೆ ಆರೋಜಿಸಲಾಗಿತ್ತು. ಈ ವೇಳೆ ಸಭೆಯಲ್ಲಿ ಯಡಿಯೂರಪ್ಪ ಜೊತೆಗೆ ಕುಳಿತುಕೊಂಡ ಶ್ರೀಮಂತ ಪಾಟೀಲ ಅವರನ್ನು ಸಂತ್ರಸ್ತ ರೈತರು ತರಾಟೆಗೆ ತೆಗೆದುಕೊಂಡರು.



ಆಗ ಊರು ಬಿಟ್ಟು ಹೋಗಿ ಇಗ್ಯಾಕೆ ನೀವು ಬಂದಿದ್ದೀರಿ. ನಾವು ನಿಮ್ಮನ್ನು ವಿಶ್ವಾವಿಟ್ಟು ಆರಿಸಿ ಕಳಿಸಿದ್ವಿ ಸ್ವಾಮಿ. ಆದ್ರೆ ನೀವು ಮಾಡಿದ್ದು ಎನು? ‌ನಮಗೆ ಮೋಸ ಮಾಡಿ ಹೋಗಿದ್ದಿರಿ ಮತ್ಯಾಕೆ ಇಲ್ಲಿಗೆ ಬಂದಿದ್ದಿರಿ? ಇಲ್ಲಿಂದ ನಡೆಯಿರಿ ಎಂದು ಆಕ್ರೋಶ 'ವ್ಯಕ್ತಪಡಿಸಿ ಘೋಷಣೆ ಕೂಗಿದರು.

ಬಿಸಿಲಿಗೆ ಹೈರಾಣ ಆಗಿ ಹೋದ ಸಂತ್ರಸ್ತರು:
ಸಿಎಂ ಪರಿಹಾರ ವಿತರಣೆ ಹಾಗೂ ಅಹವಾಲು ಸ್ವೀಕಾರ ಸಭೆಗೆ ಜಿಲ್ಲಾಡಳಿತ ಕೇವಲ ಸಿಎಂ ಮತ್ತು ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಮಾತ್ರ ವೇದಿಕೆ ಮೇಲೆ ಪೆಂಡಾಲ್ ವ್ಯವಸ್ಥೆ ಕಲ್ಪಿಸಿತ್ತು. ಹೀಗಾಗಿ ಸುಡು ಬಿಸಿಲಿನಲ್ಲೇ ಕುಳಿತುಕೊಂಡ ಸಂತ್ರಸ್ತರು, ಸುಡು ಬಿಸಿಲು ತಾಳಲಾರದೆ ತಲೆ ಮೇಲೆ ಬಟ್ಟೆ ಇಟ್ಟು ಯಡಿಯೂರಪ್ಪ ಭಾಷಣವನ್ನು ಕೇಳಿದರು.

ಈ ಕಾರ್ಯಕ್ರಮದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಪಿ ರಾಜೀವ, ದುರ್ಯೋಧನ ಐಹೊಳೆ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ