ಆ್ಯಪ್ನಗರ

ಕವಲಗುಡ್ಡ ಬಳಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಮೋಳೆ: ಜಿಲ್ಲಾಧಿಕಾರಿಗಳು ಅಥಣಿಯಲ್ಲಿ ರೈತರ ಸಭೆ ಹಮ್ಮಿಕೊಂಡು ಸಮಸ್ಯೆ ಆಲಿಸಲು ಸಮಯ ನಿಗದಿಪಡಿಸಿ ನಂತರ ರದ್ದುಗೊಳಿಸಿದ್ದರಿಂದ ಕಾಗವಾಡ, ರಾಯಬಾಗ, ಅಥಣಿ ತಾಲೂಕಿನ ...

Vijaya Karnataka 14 Nov 2018, 5:00 am
ಮೋಳೆ : ಜಿಲ್ಲಾಧಿಕಾರಿಗಳು ಅಥಣಿಯಲ್ಲಿ ರೈತರ ಸಭೆ ಹಮ್ಮಿಕೊಂಡು ಸಮಸ್ಯೆ ಆಲಿಸಲು ಸಮಯ ನಿಗದಿಪಡಿಸಿ ನಂತರ ರದ್ದುಗೊಳಿಸಿದ್ದರಿಂದ ಕಾಗವಾಡ, ರಾಯಬಾಗ, ಅಥಣಿ ತಾಲೂಕಿನ ಸಾವಿರಾರು ರೈತರು ಕವಲಗುಡ್ಡದಲ್ಲಿ ಮಂಗಳವಾರ ಕಾಗವಾಡ-ಅಥಣಿ ರಾಜ್ಯ ಹೆದ್ದಾರಿ ಮಾರ್ಗದ ಸಂಚಾರವನ್ನು ಸುಮಾರು 2 ಗಂಟೆ ಕಾಲ ತಡೆದು ಪ್ರತಿಭಟಿಸಿದರು.
Vijaya Karnataka Web BEL-13 MOLE-1 PHOTO


ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಶೀತಲ ಪಾಟೀಲ, ತಾಲೂಕಿನ ಸಕ್ಕರೆ ಕಾರ್ಖಾನೆಗಳ ಪೈಕಿ ಉಗಾರ, ಕೆಂಪವಾಡ, ಕಾಗವಾಡ ಈ ಕಾರ್ಖಾನೆಗಳು ರೈತರಿಗೆ ಮೋಸ ಮಾಡಿವೆ. ಅವರೇ ಘೋಷಿಸಿದ ದರ ನೀಡಿಲ್ಲ. ಶಾಂತಿಯುತವಾಗಿ ನಮ್ಮ ಬೇಡಿಕೆಗಳನ್ನು ಮಂಡಿಸುತ್ತ ಬಂದಿದ್ದೇವೆ. ಅಧಿಧಿಕಾರಿಗಳು ಒಂದು ಸುತ್ತಿನ ಮಾತುಕತೆ ನಡೆಸಿದ್ದರೂ ಉಗಾರ ಸಕ್ಕರೆ ಕಾರ್ಖಾನೆಯಿಂದ ರೈತನ ಮೇಲೆ ಕಲ್ಲು ಎಸೆದು ಗೂಂಡಾಗಿರಿ ಪ್ರದರ್ಶಿಸಲಾಗಿದೆ. ಬುಧವಾರದ ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ರೈತ ಮುಖಂಡ ರವೀಂದ್ರ ಗಾಣಿಗೇರ, ಕಾಗವಾಡದ ಶಶೀಕಾಂತ ಜೋಶಿ ಮಾತನಾಡಿದರು. ಚಿದಾನಂದ ಡೂಗಣ್ಣವರ, ರಾವಸಾಹೇಬ ಪಾಟೀಲ, ಗಜಾನನ ಯರೆಂಡೋಲಿ, ಆದಿನಾಥ ದಾನೋಳಿ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ