ಹೊಲಗಳಿಗೆ ಹೋಗಲು ಸಂಚಾರಕ್ಕೆ ಅವಕಾಶ ಕಲ್ಪಿಸಿ
ಹಿರೇಬಾಗೇವಾಡಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ...
Vijaya Karnataka 17 May 2020, 5:00 am
ಹಿರೇಬಾಗೇವಾಡಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಬ್ಯಾಂಕ್, ಅಂಚೆ ಕಚೇರಿ ಬಂದ್ ಆಗಿದ್ದರಿಂದ ಇಲ್ಲಿನ ರೈತರು, ಕೃಷಿ ಕಾರ್ಮಿಕರು, ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಹಾಗಾಗಿ ಗ್ರಾಮದಲ್ಲಿಬ್ಯಾಂಕ್, ಅಂಚೆ ಕಚೇರಿ ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಸ್ಥಳೀಯ ಪೊಲೀಸ್ ಠಾಣೆ ಆವರಣದಲ್ಲಿಶನಿವಾರ ಜಿಲ್ಲಾಧಿಕಾರಿ ಏರ್ಪಡಿಸಿದ್ದ ಸಭೆಯಲ್ಲಿಅವರು ಮಾತನಾಡಿದರು. ''ಮುಂಗಾರು ಸಮೀಪಿಸುತ್ತಿರುವುದರಿಂದ ರೈತರು ಹೊಲಗಳನ್ನು ಹದ ಮಾಡಿಕೊಳ್ಳಬೇಕು. ಹೊಲಗಳಿಗೆ ಹೋಗಿ ಕೊಟ್ಟಿಗೆ ಗೊಬ್ಬರ ಹಾಕುವುದು ಸೇರಿದಂತೆ ಇನ್ನೂ ಅನೇಕ ಕೃಷಿ ಚಟುವಟಿಕೆ ಕೈಗೊಳ್ಳಬೇಕಾಗಿದೆ. ಆದ್ದರಿಂದ ಇಲ್ಲಿನ ಬೆಣಚಿನಮರಡಿ ಕ್ರಾಸ್, ಕಲಾರಕೊಪ್ಪ ಗ್ರಾಮದ ರಸ್ತೆ ಹಾಗೂ ಟೋಲ್ನಾಕಾ ಬಳಿ ಬಂದ್ ಮಾಡಲಾದ ರಸ್ತೆಗಳಲ್ಲಿಟ್ರ್ಯಾಕ್ಟರ್ ಸೇರಿದಂತೆ ರೈತರ ಇನ್ನಿತರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬೇಕು'' ಎಂದು ವಿನಂತಿಸಿದರು.
ರೈತ ಮುಖಂಡ ಬಿ.ಎಸ್.ಗಾಣಗಿ, ''ರೈತರ ಬಳಿ ಸದ್ಯದ ಪರಿಸ್ಥಿತಿಯಲ್ಲಿಹಣವಿಲ್ಲ. ಕೃಷಿ ಇಲಾಖೆ ನೀಡುವ ಸಬ್ಸಿಡಿ ಬೀಜ ಹಾಗೂ ರಸಗೊಬ್ಬರಕ್ಕೆ ಈಗ ಹಣ ಪಡೆಯದೆ ಮುಂದೆ ಪಾವತಿಸಲು ಅವಕಾಶ ಮಾಡಿಕೊಡಬೇಕು. ಗ್ರಾಮದ ಅನೇಕ ರೈತರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಪರಿಕರ ಅವಲಂಬಿಸಿರುವುದರಿಂದ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿಪಾಸ್ ನೀಡಬೇಕು'' ಎಂದರು.
ಸಮಾಜ ಸೇವಕ ಬಾಪು ನಾವಲಗಟ್ಟಿ, ''ಗ್ರಾಮದಲ್ಲಿಅನೇಕ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ಕಾರ್ಡ್ನಿಂದ ವಂಚಿತರಾಗಿದ್ದಾರೆ. ಅವರೆಲ್ಲರಿಗೂ ಸರಕಾರದಿಂದ ಧನಸಹಾಯ ಮಾಡಬೇಕು'' ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲಾವತಿ ಧರೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ, ಕೋವಿಡ್-19 ನೋಡಲ್ ಅಧಿಕಾರಿ ರಾಜೇಂದ್ರ ಚೋಳನ್, ತಾಪಂ ಇಒ ಮಲ್ಲಿಕಾರ್ಜುನ ಕಲಾದಗಿ, ಸಿಪಿಐ ಎನ್.ಎನ್.ಅಂಬಿಗೇರ, ಗ್ರಾಮಸ್ಥರಾದ ಅಡಿವೇಶ ಇಟಗಿ, ಸುರೇಶ ಇಟಗಿ, ಶ್ರೀಕಾಂತ ಮಾಧುಬರಮಣ್ಣವರ, ಬಿ.ಎಸ್.ಗಾಣಗಿ, ಮಂಜುನಾಥ ಧರೆಣ್ಣವರ, ದರ್ಗಾ ಅಜ್ಜ, ಪಡಿಗೌಡ ಪಾಟೀಲ, ರಘು ಪಾಟೀಲ ಮತ್ತಿತರರು ಇದ್ದರು.
ಮನೆ ಬಾಗಿಲಿಗೆ ಬ್ಯಾಂಕ್
ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ''ಹಿರೇಬಾಗೇವಾಡಿ ಗ್ರಾಮ ಕಂಟೈನ್ಮೆಂಟ್ ಝೋನ್ ಆಗಿರುವುದರಿಂದ ಸರಕಾರದ ನಿಯಮಾವಳಿ ಪ್ರಕಾರ ಬ್ಯಾಂಕ್ ಪ್ರಾರಂಭಿಸಲು ಬರುವುದಿಲ್ಲ. ಬ್ಯಾಂಕ್ ಪ್ರತಿನಿಧಿಯು ಮನೆ ಬಾಗಿಲಿಗೆ ಬಂದು ಹಣ ನೀಡುವ ವ್ಯವಸ್ಥೆ ಮಾಡಲಾಗುವುದು. ಕೃಷಿ ಚಟುವಟಿಕೆಗಳಿಗೆ ಹೋಗುವ ರೈತರ ಟ್ರ್ಯಾಕ್ಟರ್ಗಳಿಗೆ ಪಾಸ್ ವ್ಯವಸ್ಥೆ ಕಲ್ಪಿಸಲಾಗುವುದು'' ಎಂದರು. ರೈತರಿಗೆ ವಿಳಂಬವಾಗದಂತೆ ಬೀಜ, ರಸಗೊಬ್ಬರ ಪೂರೈಸಿ ಎಂದು ಕೃಷಿ ಅಧಿಕಾರಿಗಳಿಗೆ ಆದೇಶಿಸಿದ ಜಿಲ್ಲಾಧಿಕಾರಿ, ''ಗ್ರಾಮದಲ್ಲಿಯಾವುದೇ ಹೊಸ ಕೊವಿಡ್ ಪ್ರಕರಣ ಕಂಡು ಬರದೇ ಇದ್ದಲ್ಲಿಜೂನ್ 6ಕ್ಕೆ ಲಾಕ್ಡೌನ್ ಮುಕ್ತಾಯವಾಗಲಿದೆ. ಎಲ್ಲರೂ ಇನ್ನೊಂದಷ್ಟು ದಿನ ಸಹಕರಿಸಿ'' ಎಂದು ಮನವಿ ಮಾಡಿದರು.
ಸ್ಥಳೀಯ ಪೊಲೀಸ್ ಠಾಣೆ ಆವರಣದಲ್ಲಿಶನಿವಾರ ಜಿಲ್ಲಾಧಿಕಾರಿ ಏರ್ಪಡಿಸಿದ್ದ ಸಭೆಯಲ್ಲಿಅವರು ಮಾತನಾಡಿದರು. ''ಮುಂಗಾರು ಸಮೀಪಿಸುತ್ತಿರುವುದರಿಂದ ರೈತರು ಹೊಲಗಳನ್ನು ಹದ ಮಾಡಿಕೊಳ್ಳಬೇಕು. ಹೊಲಗಳಿಗೆ ಹೋಗಿ ಕೊಟ್ಟಿಗೆ ಗೊಬ್ಬರ ಹಾಕುವುದು ಸೇರಿದಂತೆ ಇನ್ನೂ ಅನೇಕ ಕೃಷಿ ಚಟುವಟಿಕೆ ಕೈಗೊಳ್ಳಬೇಕಾಗಿದೆ. ಆದ್ದರಿಂದ ಇಲ್ಲಿನ ಬೆಣಚಿನಮರಡಿ ಕ್ರಾಸ್, ಕಲಾರಕೊಪ್ಪ ಗ್ರಾಮದ ರಸ್ತೆ ಹಾಗೂ ಟೋಲ್ನಾಕಾ ಬಳಿ ಬಂದ್ ಮಾಡಲಾದ ರಸ್ತೆಗಳಲ್ಲಿಟ್ರ್ಯಾಕ್ಟರ್ ಸೇರಿದಂತೆ ರೈತರ ಇನ್ನಿತರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬೇಕು'' ಎಂದು ವಿನಂತಿಸಿದರು.
ರೈತ ಮುಖಂಡ ಬಿ.ಎಸ್.ಗಾಣಗಿ, ''ರೈತರ ಬಳಿ ಸದ್ಯದ ಪರಿಸ್ಥಿತಿಯಲ್ಲಿಹಣವಿಲ್ಲ. ಕೃಷಿ ಇಲಾಖೆ ನೀಡುವ ಸಬ್ಸಿಡಿ ಬೀಜ ಹಾಗೂ ರಸಗೊಬ್ಬರಕ್ಕೆ ಈಗ ಹಣ ಪಡೆಯದೆ ಮುಂದೆ ಪಾವತಿಸಲು ಅವಕಾಶ ಮಾಡಿಕೊಡಬೇಕು. ಗ್ರಾಮದ ಅನೇಕ ರೈತರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಪರಿಕರ ಅವಲಂಬಿಸಿರುವುದರಿಂದ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿಪಾಸ್ ನೀಡಬೇಕು'' ಎಂದರು.
ಸಮಾಜ ಸೇವಕ ಬಾಪು ನಾವಲಗಟ್ಟಿ, ''ಗ್ರಾಮದಲ್ಲಿಅನೇಕ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ಕಾರ್ಡ್ನಿಂದ ವಂಚಿತರಾಗಿದ್ದಾರೆ. ಅವರೆಲ್ಲರಿಗೂ ಸರಕಾರದಿಂದ ಧನಸಹಾಯ ಮಾಡಬೇಕು'' ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲಾವತಿ ಧರೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ, ಕೋವಿಡ್-19 ನೋಡಲ್ ಅಧಿಕಾರಿ ರಾಜೇಂದ್ರ ಚೋಳನ್, ತಾಪಂ ಇಒ ಮಲ್ಲಿಕಾರ್ಜುನ ಕಲಾದಗಿ, ಸಿಪಿಐ ಎನ್.ಎನ್.ಅಂಬಿಗೇರ, ಗ್ರಾಮಸ್ಥರಾದ ಅಡಿವೇಶ ಇಟಗಿ, ಸುರೇಶ ಇಟಗಿ, ಶ್ರೀಕಾಂತ ಮಾಧುಬರಮಣ್ಣವರ, ಬಿ.ಎಸ್.ಗಾಣಗಿ, ಮಂಜುನಾಥ ಧರೆಣ್ಣವರ, ದರ್ಗಾ ಅಜ್ಜ, ಪಡಿಗೌಡ ಪಾಟೀಲ, ರಘು ಪಾಟೀಲ ಮತ್ತಿತರರು ಇದ್ದರು.
ಮನೆ ಬಾಗಿಲಿಗೆ ಬ್ಯಾಂಕ್
ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ''ಹಿರೇಬಾಗೇವಾಡಿ ಗ್ರಾಮ ಕಂಟೈನ್ಮೆಂಟ್ ಝೋನ್ ಆಗಿರುವುದರಿಂದ ಸರಕಾರದ ನಿಯಮಾವಳಿ ಪ್ರಕಾರ ಬ್ಯಾಂಕ್ ಪ್ರಾರಂಭಿಸಲು ಬರುವುದಿಲ್ಲ. ಬ್ಯಾಂಕ್ ಪ್ರತಿನಿಧಿಯು ಮನೆ ಬಾಗಿಲಿಗೆ ಬಂದು ಹಣ ನೀಡುವ ವ್ಯವಸ್ಥೆ ಮಾಡಲಾಗುವುದು. ಕೃಷಿ ಚಟುವಟಿಕೆಗಳಿಗೆ ಹೋಗುವ ರೈತರ ಟ್ರ್ಯಾಕ್ಟರ್ಗಳಿಗೆ ಪಾಸ್ ವ್ಯವಸ್ಥೆ ಕಲ್ಪಿಸಲಾಗುವುದು'' ಎಂದರು. ರೈತರಿಗೆ ವಿಳಂಬವಾಗದಂತೆ ಬೀಜ, ರಸಗೊಬ್ಬರ ಪೂರೈಸಿ ಎಂದು ಕೃಷಿ ಅಧಿಕಾರಿಗಳಿಗೆ ಆದೇಶಿಸಿದ ಜಿಲ್ಲಾಧಿಕಾರಿ, ''ಗ್ರಾಮದಲ್ಲಿಯಾವುದೇ ಹೊಸ ಕೊವಿಡ್ ಪ್ರಕರಣ ಕಂಡು ಬರದೇ ಇದ್ದಲ್ಲಿಜೂನ್ 6ಕ್ಕೆ ಲಾಕ್ಡೌನ್ ಮುಕ್ತಾಯವಾಗಲಿದೆ. ಎಲ್ಲರೂ ಇನ್ನೊಂದಷ್ಟು ದಿನ ಸಹಕರಿಸಿ'' ಎಂದು ಮನವಿ ಮಾಡಿದರು.