ಆ್ಯಪ್ನಗರ

ಡಿಸಿಎಂಗೆ 180 ರೂ. ಕಳಿಸಿದ ರೈತರು!

ಬೆಳಗಾವಿ: 'ನಾನೂ ಸಂತ್ರಸ್ತ ನನ್ನದೂ 80 ರಿಂದ 100 ಎಕರೆ ಕಬ್ಬು ನಾಶವಾಗಿದೆ...

Vijaya Karnataka 6 Oct 2019, 5:00 am
ಬೆಳಗಾವಿ: 'ನಾನೂ ಸಂತ್ರಸ್ತ. ನನ್ನದೂ 80 ರಿಂದ 100 ಎಕರೆ ಕಬ್ಬು ನಾಶವಾಗಿದೆ. ನನಗೂ ಪರಿಹಾರ ಬೇಕು' ಎಂದು ಸತತ ಹೇಳಿಕೆ ನೀಡುತ್ತಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ 180 ರೂ. ಧನ ಸಹಾಯ ಮಾಡುವ ಮೂಲಕ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web 5RAIT062206


ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಿಲ್ಲಾಪ್ರವಾಸ ಕೈಗೊಂಡಿದ್ದ ಎರಡೂ ದಿನ ಲಕ್ಷ್ಮಣ ಸವದಿ ರೈತರೆದುರು ''ನನ್ನ ಪಾಲಿನ ಕಬ್ಬೂ ಹಾಳಾಗಿದೆ. ರೈತರ ಬೇಡಿಕೆಯಂತೆ ಎಕರೆಗೆ ಒಂದು ಲಕ್ಷ ರೂ. ಪರಿಹಾರ ಕೊಡೋದಾದರೆ ನನಗೂ 80 ಲಕ್ಷದಿಂದ 1 ಕೋಟಿ ರೂ.ಪರಿಹಾರ ಬರಬೇಕಾಗುತ್ತದೆ'', ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿಪ್ರತಿಭಟನೆ ತೀವ್ರಗೊಳಿಸಿದ್ದ ರೈತ ಸಂಘಟನೆ ಸದಸ್ಯರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು. ಸ್ಥಳದಲ್ಲೇ 180 ರೂ. ಸಂಗ್ರಹಿಸಿ ಲಕ್ಷ್ಮಣ ಸವದಿ ಹೆಸರಿನಲ್ಲಿ ಕೊರಿಯರ್‌ ಮಾಡಿದ್ದಾರೆ.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಚೂನಪ್ಪ ಪೂಜೇರಿ, ಜಾವೇದ್‌ ಮುಲ್ಲಾ, ಅಶೋಕ ಯಮಕನಮರಡಿ, ಎಂ.ಬಿ.ಚಿಕ್ಕಮಠ, ಎಸ್‌.ಎಂ.ಕರೋಶಿ, ಆರ್‌.ಎಫ್‌.ಗಣ್ಕಿಗೌಡರ್‌, ಜಯಶ್ರೀ ಗುರನ್ನವರ, ಪ್ರಕಾಶ ನಾಯ್‌್ಕ ಮತ್ತಿತರರು ಪ್ರತಿಭಟನೆಯಲ್ಲಿಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ