ಆ್ಯಪ್ನಗರ

300ಕ್ಕೂ ಹೆಚ್ಚು ಟ್ರ್ಯಾಕ್ಟರ್‌ ತಡೆದ ರೈತರು

ಕಾಗವಾಡ: ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದ 300ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳನ್ನು ...

Vijaya Karnataka 19 Nov 2018, 5:00 am
ಕಾಗವಾಡ : ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದ 300ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳನ್ನು ಭಾನುವಾರ ನಾನಾ ರೈತ ಸಂಘಟನೆಗಳ ಸದಸ್ಯರು ಮಾರ್ಗ ಮಧ್ಯದಲ್ಲೇ ತಡೆದು ರಸ್ತೆ ಪಕ್ಕದಲ್ಲಿ ಟೆಂಟ್‌ ಹಾಕಿ ಕಾವಲು ಕೂತಿದ್ದಾರೆ.
Vijaya Karnataka Web BEL-18 KAGWAD 1 B NEWS PHOTO


ಕಾಗವಾಡದ ಸ್ವಾಭಿಮಾನಿ ರೈತ ಸಂಘಟನೆ, ಉಗಾರದ ಕಬ್ಬು ಬೆಳೆಗಾರರ ಸಂಘ, ಐನಾಪುರದ ರೈತ ಹಿತರಕ್ಷ ಣಾ ಸಮಿತಿ, ಕರ್ನಾಟಕ ಹಸಿರು ಕ್ರಾಂತಿ ರೈತ ಸಂಘಟನೆ ಸದಸ್ಯರು ಕಾಗವಾಡ, ಮುರಗುಂಡಿ, ದರೂರ ಮಾರ್ಗಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿರುವ ವಾಹನಗಳನ್ನು ತಡೆದಿದ್ದಾರೆ.

ಈ ವೇಳೆ ಮಾತನಾಡಿದ ಮುಖಂಡರು, ಜಿಲ್ಲಾಧಿಕಾರಿಗಳ ಆದೇಶದಂತೆ ಕಾರ್ಖಾನೆಗಳು ಎಫ್‌ಆರ್‌ಪಿ ದರ ಘೋಷಿಸಿವೆ. ಆದರೆ, ಅದರಲ್ಲಿ ಕಟಾವು ಮತ್ತು ಸಾಗಣಿಕೆ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಕಬ್ಬಿಗೆ ಸೂಕ್ತ ದರಕ್ಕಾಗಿ ರೈತರು ಕಳೆದ 20 ದಿನಗಳಿಂದ ಹೋರಾಟ ಆರಂಭಿಸಿದ್ದಾರೆ. ಆದರೆ, ಕಾರ್ಖಾನೆಗಳು ರೈತರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳೂ ರೈತರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ಐನಾಪುರ ಪಿಕೆಪಿಎಸ್‌ ಆಧ್ಯಕ್ಷ ಕುಮಾರ ಅಪರಾಜ, ಕಾಗವಾಡದ ಶಶಿಕಾಂತ ಜೋಶಿ, ಎಂ.ಬಿ. ಉದಗಾಂವೆ, ರವೀಂದ್ರ ಗಾಣಿಗೇರ ಇತರರು ಇದ್ದರು.

ಕಾಗವಾಡ ಹಾಗೂ ಮುರಗುಂಡಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಸಂಜಯ ಬಿರಡಿ, ಐನಾಪುರ ಪಿಕೆಪಿಎಸ್‌ ಅಧ್ಯಕ್ಷ ಕುಮಾರ ಅಪರಾಜ, ಉಪಾಧ್ಯಕ್ಷ ಆದಿನಾಥ ದಾನೋಳಿ ಅವರು ಊಟ ಮತ್ತು ಕುಡಿಯುವ ನೀರು ಪೂರೈಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ