ಆ್ಯಪ್ನಗರ

ಹೊಸ ಸಾಲದ ಹಣ ನೀಡದ ಆರೋಪ: ಅಧಿಕಾರಿಗಳು ತರಾಟೆಗೆ

ಹುಕ್ಕೇರಿ: ಹೊಸ ಸಾಲ ಪಡೆದ ಹಣವನ್ನು ರೈತರ ಖಾತೆಯಲ್ಲಿದ್ದರೂ ಬಿಡಿಸಿಸಿ ಬ್ಯಾಂಕ್‌ನವರು ನೀಡುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ರೈತರು ಬಿಡಿಸಿಸಿ ಬ್ಯಾಂಕ್‌ ...

Vijaya Karnataka 5 Jun 2018, 5:00 am
ಹುಕ್ಕೇರಿ: ಹೊಸ ಸಾಲ ಪಡೆದ ಹಣವನ್ನು ರೈತರ ಖಾತೆಯಲ್ಲಿದ್ದರೂ ಬಿಡಿಸಿಸಿ ಬ್ಯಾಂಕ್‌ನವರು ನೀಡುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ರೈತರು ಬಿಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ಹಾಗೂ ತಾಲೂಕು ನಿಯಂತ್ರಣಾಧಿಕಾರಿ ಎನ್‌.ಎಸ್‌. ಬಿರಾದಾರಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡರು.
Vijaya Karnataka Web BEL-4 HUKKERI 01 IMP


ಸೋಮವಾರ ಬೆಳಗ್ಗೆ 7 ಗಂಟೆಯಿಂದಲೇ ರೈತರು ಹಣ ಪಡೆದುಕೊಳ್ಳಲು ಸರದಿ ಸಾಲಿನಲ್ಲಿ ನಿಂತಿದ್ದರು. ಬ್ಯಾಂಕ್‌ ಆರಂಭವಾಗುತ್ತಿದ್ದಂತೆ ಬೆಳೆ ಸಾಲ ನೀಡಲು ಬ್ಯಾಂಕ್‌ನ ಅಧಿಕಾರಿಗಳನ್ನು ಹಲವು ಬಾರಿ ಮನವಿ ಮಾಡಿದರು. ಆದರೆ, ಬ್ಯಾಂಕ್‌ನ ಅಧಿಕಾರಿಗಳು ಹಣ ನೀಡಲು ಹಿಂದೇಟು ಹಾಕುತ್ತಿದ್ದಂತೆ ರೈತರು ಆಕ್ರೋಶಗೊಂಡು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಈ ವೇಳೆ ಗಲಿಬಿಲಿಗೊಂಡ ಅಧಿಕಾರಿಗಳು ರೈತರನ್ನು ಹೊರದೂಡಿ ಬ್ಯಾಂಕ್‌ನ ಬಾಗಿಲು ಬಂದ್‌ ಮಾಡಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ರೈತರು ಬ್ಯಾಂಕ್‌ ಎದುರು ಪ್ರತಿಭಟನೆ ಮಾಡಿದರು. ರೈತರು ತಮ್ಮ ಖಾತೆಯಲ್ಲಿರುವ ಹಣದ ವಿವರಣೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಹಣದ ವಿವರಣೆ ಕೇಳಿದರೂ ರೈತರ ಜತೆ ಸ್ಪಂದಿಸದೆ ಇರುವುದು ಈ ಘಟನೆಗೆ ಕಾರಣವಾಗಿತ್ತು.

ಈ ಬಗ್ಗೆ ಶಾಸಕ ಉಮೇಶ ಕತ್ತಿ ಸ್ಪಷ್ಟನೆ ನೀಡಿ, ಜಿಲ್ಲೆಗೆ ಸರಕಾರ ಸಾಲ ಮನ್ನಾ ಮಾಡಿರುವ 1 ಸಾವಿರ ಕೋಟಿ ರೂ. ಪೈಕಿ 36 ಕೋಟಿ ಮಾತ್ರ ಬಿಡುಗಡೆಯಾಗಿದೆ. ಜನವರಿ, ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾದ ಹಣವನ್ನು ರೈತರಿಗೆ ಹಂಚಲಾಗಿದೆ. ಮಾರ್ಚ್‌ ತಿಂಗಳಿನಲ್ಲಿ ಸರಕಾರದಿಂದ ಹಣ ಬಂದಿಲ್ಲ, ಬಂದ ತಕ್ಷ ಣ ರೈತರಿಗೆ ಸಂಪೂರ್ಣ ಹಣ ಕೊಡಲಾಗುವುದು ಎಂದು ಹೇಳಿದರು.

ಕೆಲಸ ಬಿಟ್ಟು ಬರಬೇಕಿಲ್ಲ..: ರೈತರು ಕೆಲಸಗಳನ್ನು ಬಿಟ್ಟು ಹುಕ್ಕೇರಿಗೆ ಬರುವ ಅವಶ್ಯಕತೆ ಇಲ್ಲ. ಹಣವನ್ನು ಗ್ರಾಮಗಳಲ್ಲಿರುವ ಕೃಷಿ ಪತ್ತಿನ ಬ್ಯಾಂಕ್‌ನಲ್ಲಿ ಜಮಾ ಮಾಡಲಾಗುವುದು. ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಖಾತೆ ಹೊಂದಿದ ರೈತರಿಗೆ, ಈಗಾಗಲೇ ಎಟಿಎಂ ಕಾರ್ಡ್‌ಗಳನ್ನು ವಿತರಿಸಲಾಗಿದೆ. ರೈತರು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ತಮ್ಮ ಖಾತೆ ಹೊಂದಿದ್ದರೆ, ಅದರ ವಿವರ ನೀಡಬೇಕು. ಆ ಖಾತೆಗೆ ಜಮಾ ಮಾಡಿ ರೈತರಿಗೆ ಹಣ ಸಿಗುವ ಹಾಗೆ ವ್ಯವಸ್ಥೆ ಮಾಡಲಾಗುವುದು.
-ರಮೇಶ ಕತ್ತಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ