ಆ್ಯಪ್ನಗರ

ನಾನಾ ಬೇಡಿಕೆಗಳ ಈಡೇರಿಕೆಗೆ ರೈತರ ಆಗ್ರಹ

ಚಿಕ್ಕೋಡಿ : ಕರಗಾಂವ, ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗಳ ಜಾರಿ, ಚಿಕ್ಕೋಡಿ ಜಿಲ್ಲೆ ರಚನೆ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು 'ಬರ ಪೀಡಿತ' ಎಂದು ...

Vijaya Karnataka 9 Dec 2018, 5:00 am
ಚಿಕ್ಕೋಡಿ : ಕರಗಾಂವ, ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗಳ ಜಾರಿ, ಚಿಕ್ಕೋಡಿ ಜಿಲ್ಲೆ ರಚನೆ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು 'ಬರ ಪೀಡಿತ' ಎಂದು ಘೋಷಿಸಲು ಆಗ್ರಹಿಸಿ ಕನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬಸವ ಸರ್ಕಲ್‌ ಬಳಿ ರಸ್ತೆ ತಡೆ ನಡೆಸಿ ತಹಸೀಲ್ದಾರ್‌ ರೇಶ್ಮಾ ತಾಳಿಕೋಟೆಯವರಿಗೆ ಶನಿವಾರ ಮನವಿ ಸಲ್ಲಿಸಿದರು.
Vijaya Karnataka Web BEL-8CKD2


ಕಳೆದ ಹಲವು ವರ್ಷಗಳಿಂದ ತಾಲೂಕಿನ ನಾಗರಮುನ್ನೋಳಿ ಹೋಬಳಿಯ ಬಹುತೇಕ ಎಲ್ಲ ಹಳ್ಳಿಗಳು ನೀರಾವರಿ ಸೌಲಭ್ಯದಿಂದ ವಂಚಿತವಾಗಿವೆ. ಕಳೆದ 4-5 ವರ್ಷಗಳಿಂದ ಮಳೆ ಇಲ್ಲದೆ ಜನ-ಜಾನುವಾರುಗಳಿಗೆ ಕುಡಿಯಲು ನೀರು, ಮೇವು ಇಲ್ಲದೆ ಗೋಶಾಲೆಗಳ ಮೂಲಕ ಮೇವಿಗಾಗಿ ಪರದಾಡಬೇಕಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕರಗಾಂವ ಏತ ನೀರಾವರಿ ಅನುಷ್ಠಾನಕ್ಕೆ ಹೋರಾಟ ಮಾಡಿದರೂ ಇಲ್ಲಿಯವರೆಗೆ ನೀರಾವರಿ ಸೌಲಭ್ಯವನ್ನು ಯಾವುದೇ ಸರಕಾರ ಒದಗಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.

ಜಿಲ್ಲೆಯ ಕೇವಲ ಮೂರು ತಾಲೂಕುಗಳನ್ನು 'ಬರ ಪೀಡಿತ' ಎಂದು ಘೋಷಿಸಲಾಗಿದೆ. ಆದರೆ ಎಲ್ಲ ತಾಲೂಕುಗಳಲ್ಲಿ ಸರಿಯಾಗಿ ಮಳೆಯಾಗದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಕಾರಣ ಎಲ್ಲ ತಾಲೂಕುಗಳನ್ನು 'ಬರ ಪೀಡಿತ'ವೆಂದು ಘೋಷಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಕಳೆದ 25 ವರ್ಷಗಳಿಂದ ಚಿಕ್ಕೋಡಿ ಜಿಲ್ಲೆಯಾಗಬೇಕು ಎಂದು ಹೋರಾಟಗಳು ನಡೆದಿದ್ದು ರಾಜಕೀಯ ಮುಖಂಡರ ಒಳಸಂಚಿನಿಂದ ಜಿಲ್ಲಾ ವಿಭಜನೆಗೆ ಹಿನ್ನಡೆಯಾಗುತ್ತದೆ. ಈ ಭಾಗದ ಜನರ ಅನುಕೂಲಕ್ಕಾಗಿ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ವಕ್ತಾರ ತ್ಯಾಗರಾಜ ಕದಮ ಮಾತನಾಡಿದರು. ಮಹಾವೀರ ಮೋಹಿತೆ, ರಂಗನಾಥ ಪಾಂಡ್ರಿ, ಬಿ.ಆರ್‌.ಸಂಗಪ್ಪಗೋಳ, ಸಂಜು ಬಡಿಗೇರ, ಬಸವರಾಜ ಢಾಕೆ, ಶಂಕರ ಪಡೇದ, ಸತ್ತಿಗೌಡ ಪಾಟೀಲ, ಪರಪ್ಪಾ ನೀರಲೆ, ಪರಸಪ್ಪ ಕರಿಕಟ್ಟಿ, ಭೀಮಪ್ಪಾ ಹಿರೇಕುಬರ, ಚಂದ್ರಶೇಖರ ಸಾರಂಗಿ, ಆನಂದ ಪಾಶ್ಚಾಪುರೆ, ಮನೋಜ ಮನಗೂಳಿ, ಮಾರುತಿ ಬಾಗಿ, ಹನುಮಂತ ಹನಮಣ್ಣವರ, ನಿಂಗಪ್ಪಾ ಮೆಟಗುಡ್ಡ, ರಾಜೇಂದ್ರ ಪಾಶ್ಚಾಪುರೆ, ಮಹಾದೇವ ಸನದಿ, ಸಿದ್ದಪ್ಪಾ ಹಣಗಂಡಿ, ಲಕ್ಷ ್ಮಣ ಮುರಗಜಣ್ಣವರ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ