ವಿದ್ಯುತ್ ತಂತಿ ತಗುಲಿ ತಂದೆ-ಮಗ ಸಾವು
ಯಮಕನಮರಡಿ: ಗ್ರಾಮದಲ್ಲಿ ಮನೆಯಲ್ಲಿ ಅರ್ಥಿಂಗ್ ತಂತಿ ತಗುಲಿ ವಿದ್ಯುದಾಘಾತಕ್ಕೊಳಗಾದ ...
Vijaya Karnataka 12 Aug 2019, 5:00 am
ಯಮಕನಮರಡಿ: ಗ್ರಾಮದಲ್ಲಿ ಮನೆಯಲ್ಲಿ ಅರ್ಥಿಂಗ್ ತಂತಿ ತಗುಲಿ ವಿದ್ಯುದಾಘಾತಕ್ಕೊಳಗಾದ ತಂದೆ ಹಾಗೂ ಅವರನ್ನು ಉಳಿಸಲು ಹೋದ ಮಗ ಇಬ್ಬ ರೂ ಭಾನುವಾರ ಮೃತಪಟ್ಟಿದ್ದಾರೆ.
ಅಶೋಕ ಶಿವಾನಂದ ತುಬಚಿ(61), ಮಗ ಅಭಿಷೇಕ್ (32)ಮೃತಪಟ್ಟವರು.
ಅಶೋಕ ತುಬಚಿಯವರು ಸ್ನಾನ ಮಾಡಿ ಕೋಣೆಯಿಂದ ಹೊರಬಂದು ಹಸಿ ಬಟ್ಟೆಯನ್ನು ತಂತಿ ಮೇಲೆ ಹಾಕುವಾಗ ಪಕ್ಕದಲ್ಲಿರುವ ಅರ್ಥಿಂಗ್ ತಂತಿ ತಗಲಿತು. ವಿದ್ಯುದಾಘಾತಕ್ಕೆ ಒಳಗಾದ ಅವರನ್ನು ಉಳಿಸಲು ಹೋಗಿ ಸ್ಪರ್ಷಿಸಿದ ಮಗ ಅಭಿಷೇಕ್ಗೂ ಶಾಕ್ ತಗುಲಿತು. ಅಶೋಕ ಅವರು ಸ್ಥಳದಲ್ಲಿ ಮೃತಪಟ್ಟಿದ್ದು ಅಭಿಷೇಕ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟರು.
ಅಭಿಷೇಕ್ಗೆ ಮಧ್ಯಾಹ್ನ 3ಗಂಟೆಗೆ ಹೆಣ್ಣು ನೋಡಲು ಹೋಗುವ ಸಿದ್ಧತೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ಶಿವಾನಂದ ತುಬಚಿ(61), ಮಗ ಅಭಿಷೇಕ್ (32)ಮೃತಪಟ್ಟವರು.
ಅಶೋಕ ತುಬಚಿಯವರು ಸ್ನಾನ ಮಾಡಿ ಕೋಣೆಯಿಂದ ಹೊರಬಂದು ಹಸಿ ಬಟ್ಟೆಯನ್ನು ತಂತಿ ಮೇಲೆ ಹಾಕುವಾಗ ಪಕ್ಕದಲ್ಲಿರುವ ಅರ್ಥಿಂಗ್ ತಂತಿ ತಗಲಿತು. ವಿದ್ಯುದಾಘಾತಕ್ಕೆ ಒಳಗಾದ ಅವರನ್ನು ಉಳಿಸಲು ಹೋಗಿ ಸ್ಪರ್ಷಿಸಿದ ಮಗ ಅಭಿಷೇಕ್ಗೂ ಶಾಕ್ ತಗುಲಿತು. ಅಶೋಕ ಅವರು ಸ್ಥಳದಲ್ಲಿ ಮೃತಪಟ್ಟಿದ್ದು ಅಭಿಷೇಕ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟರು.
ಅಭಿಷೇಕ್ಗೆ ಮಧ್ಯಾಹ್ನ 3ಗಂಟೆಗೆ ಹೆಣ್ಣು ನೋಡಲು ಹೋಗುವ ಸಿದ್ಧತೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.