ಆ್ಯಪ್ನಗರ

ನದಿ ತೀರಗಳಲ್ಲಿ ನೆರೆ ಭೀತಿ; ಕೊಯ್ನಾ ಆಣೆಕಟ್ಟು, ಹಿಡಕಲ್‌ ಡ್ಯಾಂ, ನವಿಲು ತೀರ್ಥ ಜಲಾಶಯಗಳಿಂದ ಮತ್ತಷ್ಟು ನೀರು ಬಿಡುಗಡೆ

ಬೆಳಗಾವಿ: ಜಿಲ್ಲೆಯಲ್ಲಿಮಳೆ ಅಬ್ಬರ ಭಾನುವಾರ ...

Vijaya Karnataka 17 Aug 2020, 5:00 am
ಬೆಳಗಾವಿ: ಜಿಲ್ಲೆಯಲ್ಲಿಮಳೆ ಅಬ್ಬರ ಭಾನುವಾರ ಮತ್ತಷ್ಟು ಹೆಚ್ಚಿದ್ದು, ಸಹಜ ಜನ ಜೀವನಕ್ಕೆ ಧಕ್ಕೆಯಾಗಿದೆ. ಕೃಷ್ಣಾ ನದಿ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಿಗೆ ಜಲಾಶಯಗಳಿಂದ ನೀರು ಬಿಟ್ಟಿದ್ದರಿಂದ ನದಿ ಹರಿವು ಹೆಚ್ಚಿದ್ದು ತೀರದ ಪ್ರದೇಶದಲ್ಲಿಪ್ರವಾಹದ ಆತಂಕ ಎದುರಾಗಿದೆ.
Vijaya Karnataka Web 16BGM6064622
ಮಹಾರಾಷ್ಟ್ರದ ಕೊಯ್ನಾ ಜಲಾಶಯಯಿಂದ ನೀರು ಬಿಟ್ಟಿರುವುದು.


ಶನಿವಾರದವರೆಗೆ ಕೊಯ್ನಾ ಜಲಾಶಯದಿಂದ 10 ಸಾವಿರ ಕ್ಯೂಸೆಕ್‌ ನೀರು ಹೊರಬಿಡಲಾಗುತ್ತಿತ್ತು. ಭಾನುವಾರ ಮಧ್ಯಾಹ್ನದ ವೇಳೆಗೆ 56 ಸಾವಿರ ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ. ರಾಜಾಪುರ ಬ್ಯಾರೇಜ…, ದೂಧಗಂಗಾ ನದಿ ಸೇರಿ ಕಲ್ಲೋಳ ಸೇತುವೆ ಬಳಿ ಹರಿದು ಬರುತ್ತಿದ್ದ ನೀರಿನ ಪ್ರಮಾಣ 90 ಸಾವಿರ ಕ್ಯೂಸೆಕ್‌ ನಿಂದ 1.50 ಲಕ್ಷ ಕ್ಯೂಸೆಕ್‌ಗೆ ಏರಿದೆ. ಇದರಿಂದ ಚಿಕ್ಕೋಡಿ ಭಾಗದ ಕೃಷ್ಣಾ ನದಿ ಪಾತ್ರದಲ್ಲಿಅಲ್ಲಲ್ಲಿಸ್ವಲ್ಪ ಪ್ರಮಾಣದ ನೀರು ನುಗ್ಗಿದೆ. ಒಳ ಹರಿವಿನ ಪ್ರಮಾಣ ಎರಡು ಲಕ್ಷಕ್ಕೆ ತಲುಪಿದರೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಲಿದೆ.

ಪ್ರವಾಹ ನಿಯಂತ್ರಿಸುವ ಸಲುವಾಗಿ ಆಲಮಟ್ಟಿ ಜಲಾಶಯದಿಂದಲೂ ಹೊರ ಹರಿವಿನ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಭಾನುವಾರ ಬೆಳಗ್ಗೆವರೆಗೆ 1.50 ಲಕ್ಷ ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿತ್ತು. ಒಳ ಹರಿವು ಹೆಚ್ಚಿದ್ದರಿಂದ 2.20 ಲಕ್ಷ ಕ್ಯೂಸೆಕ್‌ ನೀರು ಹೊರಬಿಡಲಾಗುತ್ತಿದೆ ಎಂದು ಜಲಮಂಡಳಿ ಇಲಾಖೆ ಸುಪರಿಟೆಂಡೆಂಟ್‌ ಎಂಜಿನಿಯರ್‌ ಅರವಿಂದ ಕಣಗಿಲ್‌ ತಿಳಿಸಿದ್ದಾರೆ.

ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ
ಘಟಪ್ರಭಾ ನದಿ ಜಲಾನಯನ ಪ್ರದೇಶದಲ್ಲಿಯೂ ಧಾರಾಕಾರ ಮಳೆಯಾಗುತ್ತಿರುವುದರಿಂದ ಹಿಡಕಲ್‌ ಜಲಾಶಯಕ್ಕೆ ವ್ಯಾಪಕ ನೀರು ಹರಿದುಬರುತ್ತಿದೆ. 2175 ಅಡಿ ಗರಿಷ್ಠ ಸಾಮರ್ಥ್ಯದ ಹಿಡಕಲ್‌ ಜಲಾಶಯ ಈಗಾಗಲೇ ಶೇ. 95 ರಷ್ಟು (2173.10 ಅಡಿ) ಭರ್ತಿಯಾಗಿದ್ದು, ಹೊರ ಹರಿವು ಹೆಚ್ಚಿಸಲಾಗುತ್ತಿದೆ. ಭಾನುವಾರ ಸಂಜೆವರೆಗೆ ಘಟಪ್ರಭಾ ನದಿಗೆ 21,679 ಕ್ಯೂಸೆಕ್‌ ನೀರು ಹರಿಬಿಡಲಾಗಿದೆ. ಸಂಜೆ ಅದನ್ನು 40 ಸಾವಿರ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಅಲ್ಲದೆ, ಹೊರ ಹರಿವಿನ ಪ್ರಮಾಣ 50 ಸಾವಿರ ಕ್ಯೂಸೆಕ್‌ ವರೆಗೂ ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಗಾಗಿ ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿ ದಡದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ನೀರಾವರಿ ನಿಗಮ ಎಚ್ಚರಿಸಿದೆ.

ಮಲಪ್ರಭಾದಿಂದ 20 ಸಾವಿರ ಕ್ಯೂಸೆಕ್‌ ನೀರು

ಮಲಪ್ರಭಾ ನದಿ ಜಲಾನಯನ ಪ್ರದೇಶದಲ್ಲಿಯೂ ವ್ಯಾಪಕ ಮಳೆಯಿಂದ ಮಲಪ್ರಭಾ (ನವಿಲು ತೀರ್ಥ) ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದೆ. ಮಧ್ಯಾಹ್ನದ ವೇಳೆಗೆ 12 ಸಾವಿರ ಕ್ಯೂಸೆಕ್‌ ನೀರು ಹೊರಬಿಡಲಾಗುತ್ತಿತ್ತು. ಸಂಜೆ ಒಳಹರಿವಿನ ಪ್ರಮಾಣ 24 ಸಾವಿರ ಕ್ಯೂಸೆಕ್‌ಗೆ ತಲುಪಿದ್ದರಿಂದ ಹೊರ ಹರಿವನ್ನು 20 ಸಾವಿರ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಹೀಗಾಗಿ ನದಿ ಪಾತ್ರದ ಕೆಲ ಪ್ರದೇಶಗಳಲ್ಲಿಸ್ವಲ್ಪ ಪ್ರಮಾಣದದಲ್ಲಿನೀರು ನುಗ್ಗಿದೆ. ಮುನವಳ್ಳಿಯ ಹಳೇ ಸೇತುವೆ ನೀರಿನಲ್ಲಿಮುಳುಗಿದ್ದು ಸಂಚಾರ ಸ್ಥಗಿತವಾಗಿದೆ. ಜಲಾಶಯದ ಒಳ ಹರಿವು ಆಧರಿಸಿ ಇನ್ನೂ ಹೆಚ್ಚಿನ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ