ಆ್ಯಪ್ನಗರ

ಉಗಾರದ ಬ್ಯಾಡ್ಮಿಂಟನ್‌ ತರಬೇತುದಾರ ಸ್ನೇಹಲ್ ಸತ್ಕಾರ

ಉಗಾರ: ಯುವ ಬ್ಯಾಡ್ಮಿಂಟನ್‌ ಆಟಗಾರ ಹಾಗೂ ತರಬೇತುದಾರ ಸ್ನೇಹಲ್ ಗೆ ದಾದು ಕಾಂಬಳೆ ಅವರನ್ನು ನೆರೆಯ ಮಹಾರಾಷ್ಟ್ರದ ಸಾಂಗಲಿ ನಗರದಲ್ಲಿ ರಾಜ್ಯ ಮಟ್ಟದ ...

Vijaya Karnataka 5 Jun 2019, 5:00 am
ಉಗಾರ : ಉಗಾರದ ಯುವ ಬ್ಯಾಡ್ಮಿಂಟನ್‌ ಆಟಗಾರ ಹಾಗೂ ಖ್ಯಾತ ತರಬೇತುದಾರ ಸ್ನೇಹಲ್ ದಾದು ಕಾಂಬಳೆ ಅವರನ್ನು ನೆರೆಯ ಮಹಾರಾಷ್ಟ್ರದ ಸಾಂಗಲಿ ನಗರದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ತರಬೇತುದಾರರೆಂದು ಆಯ್ಕೆಮಾಡಿ, ಗೌರವಿಸಲಾಯಿತು.
Vijaya Karnataka Web BEL-04 UGAR 1 NEWS PHOTO


ಸೋಮವಾರ ಸಾಂಗಲಿಯ ಕೃಷ್ಣಾವೇಲಿ ಸ್ಪೋರ್ಟ್ಸ್ ಕ್ಲಬ್‌ ವತಿಯಿಂದ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್‌ ಆಟಗಾರರಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಸ್ನೇಹಲ್ ಕಾಂಬಳೆ ಅವರನ್ನು ರಾಷ್ಟ್ರೀಯ ತರಬೇತುದಾರ ಥಿಮೀರ ಅರಬರೆ ಅವರು ಸನ್ಮಾನಿಸಿದರು.

ಉಗಾರ ಸಕ್ಕರೆ ಕಾರ್ಖಾನೆಯ ಕಾರ್ಮಿಕ ದಾದು ಕಾಂಬಳೆ ಅವರ ಪುತ್ರರಾಗಿರುವ ಸ್ನೇಹಲ್ ವಿಜಯಪುರ, ಬೆಳಗಾವಿ, ಬಾಗಲಕೋಟ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬ್ಯಾಡ್ಮಿಂಟನ್‌ ತರಬೇತಿ ನೀಡಿದ್ದಾರೆ.

ಸಾಂಗಲಿಯಲ್ಲಿ ನಡೆದ ಶಿಬಿರದಲ್ಲಿ ಕಲಬುರಗಿ, ಚೆನ್ನೈ, ಪುಣೆ, ಕರಾಡ, ರತ್ನಾಗಿರಿ, ಕೊಲ್ಲಾಪುರ, ಸೋಲಾಪುರ ಸೇರಿದಂತೆ ಅನೇಕ ನಗರಗಳಿಂದ ಆಗಮಿಸಿದ 65 ಬ್ಯಾಡ್ಮಿಂಟನ್‌ ಆಟಗಾರರಿಗೆ ತರಬೇತಿ ನೀಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ