ಆ್ಯಪ್ನಗರ

‘ಚಿನ್ನದ ಹುಡುಗಿ’ ಅಶ್ವಿನಿಗೆ ಕಾಲೇಜು ವತಿಯಿಂದ ಸನ್ಮಾನ

ಪರಮಾನಂದವಾಡಿ: ಗ್ರಾಮದ ಶ್ರೀ ಹಾಲಸಿದ್ದೇಶ್ವರ ಶಿಕ್ಷ ಣ ಸಂಸ್ಥೆಯ ಶ್ರೀ ಜೆಪಿ...

Vijaya Karnataka 5 Jun 2019, 5:00 am
ಪರಮಾನಂದವಾಡಿ : ಗ್ರಾಮದ ಶ್ರೀ ಹಾಲಸಿದ್ದೇಶ್ವರ ಶಿಕ್ಷ ಣ ಸಂಸ್ಥೆಯ ಶ್ರೀ ಜೆ.ಪಿ. ಶಿರಗೂರಕರ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದಅಂತಿಮ ವರ್ಷದ ವಿದ್ಯಾರ್ಥಿನಿ ಅಶ್ವಿನಿ ಸದಾಶಿವ ಖವಟಕೊಪ್ಪ 'ಮಾರುಕಟ್ಟೆ ನಿರ್ವಹಣೆ' ವಿಷಯದಲ್ಲಿ ಶೇ. 98 ಅಂಕ ಗಳಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಥಮ ರಾರ‍ಯಂಕ್‌ದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
Vijaya Karnataka Web BEL-04 PARAMANANDAWADI 01


ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2017-18ನೇ ಶೈಕ್ಷ ಣಿಕ ವರ್ಷದ 7ನೇ ಘಟಿಕೋತ್ಸವದಲ್ಲಿ ಅವರಿಗೆ ಪದಕ ಪ್ರದಾನ ಮಾಡಲಾಯಿತು.

ಈ ಹಿನ್ನೆಲೆಯಲ್ಲಿ ಅವರನ್ನು ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ವಿ.ಬಿ.ದಳವಾಯಿ, ಕಾರ್ಯದರ್ಶಿ ವಿಜಯ ದಳವಾಯಿ, ಪ್ರಾಚಾರ್ಯ ಕೆ.ಎಂ.ಆಗೇರ ಹಾಗೂ ಪಿಯು ವಿಭಾಗದ ಪ್ರಾಚಾರ್ಯ ಎನ್‌.ಬಿ. ಕುಸನಾಳೆ, ತಾಪಂ ಸದಸ್ಯ ಸಾತಪ್ಪ ಅಂಬಿ, ಪಾಲಕರಾದ ಎಂ.ಎಂ. ಖವಟಕೊಪ್ಪ ಮತ್ತು ವಿದ್ಯಾಲಯದ ಉಪನ್ಯಾಸಕರು ಹಾಗೂ ಬೋಧಕೇತರ ವರ್ಗದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ