ಆ್ಯಪ್ನಗರ

ರೈತರ ಕಬ್ಬಿನ ದರ ನಿಡದಿದ್ದರೆ ಉಗ್ರ ಹೋರಾಟ ಎಚ್ಚರಿಕೆ

ಕುಡಚಿ: ಕಬ್ಬಿನ ದರದಲ್ಲಿ ಕಾರ್ಖಾನೆ ಮಾಲೀಕರು ಮನಬಂದತೆ ನಡೆದುಕೊಳ್ಳುವುದನ್ನು ಬಿಟ್ಟು ಸರಕಾರ ನಿಗದಿಪಡಿಸಿದಂತೆ ನಡೆದುಕೊಳ್ಳಬೇಕು...

Vijaya Karnataka 9 Nov 2018, 5:00 am
ಕುಡಚಿ : ಕಬ್ಬಿನ ದರದಲ್ಲಿ ಕಾರ್ಖಾನೆ ಮಾಲೀಕರು ಮನಬಂದತೆ ನಡೆದುಕೊಳ್ಳುವುದನ್ನು ಬಿಟ್ಟು ಸರಕಾರ ನಿಗದಿಪಡಿಸಿದಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ರೈತ ಒಕ್ಕೂಟದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಗುರುವಾರ ಹಾಲಶಿರಗೂರ ಗ್ರಾಮದ ದಳವಾಯಿ ತೋಟದಲ್ಲಿ ನಡೆದ ರೈತರ ಸಭೆಯಲ್ಲಿ ರೈತರು ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದರು.
Vijaya Karnataka Web fierce fighting warning if farmers do not have sugarcane prices
ರೈತರ ಕಬ್ಬಿನ ದರ ನಿಡದಿದ್ದರೆ ಉಗ್ರ ಹೋರಾಟ ಎಚ್ಚರಿಕೆ


ಕಳೆದ ವರ್ಷ ಒಂದು ಟನ್‌ ಕಬ್ಬಿಗೆ 2900 ರೂ. ದರ ಘೋಷಿಸಿದ್ದು ಅದನ್ನು ಕೆಲವು ರೈತರಿಗೆ ಮಾತ್ರ ನೀಡಲಾಗಿದೆ. ಉಳಿದವರಿಗೆ ಇನ್ನೂ ತಲುಪಿಲ್ಲ. ಭಾಕಿ ಇರುವ ಕಬ್ಬಿನ ಬಿಲ್‌ ಆಯಾ ರೈತರ ಖಾತೆಗಳಿಗೆ ಕೂಡಲೇ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಕಿಸಾನ ಘಟಕದ ರಾಜ್ಯ ಉಪಾಧ್ಯಕ್ಷ ದಸ್ತಗೀರ ಕಾಗವಾಡೆ, ರೈತ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಪರಮೇಶ್ವರ ಮುಳ್ಳೂರ, ಸಂಜಯ ನಾಡಗೌಡ, ಬಾಬಾಸಾಬ ಕಾಗವಾಡೆ, ಭೀಮಪ್ಪಾ ದಳವಾಯಿ, ರಾಜೇಂದ್ರ ಗಣೇಶವಾಡಿ, ಎಸ್‌.ಎಸ್‌. ಮೇಟಿ, ಎಲ್‌.ಕೆ. ಒಡೆಯರ, ಎ.ಆರ್‌. ಹಿರೇಮಠ, ಸಿದ್ದು ದಳವಾಯಿ, ಬಾಬಾಸಾಬ ಮುಲ್ಲಾ ಅಶೋಕ ಗೂಡೋಡಗಿ, ಸಿದ್ದು ಧೂಪದಾಳ, ಶಿರಗೂರ, ಸಿದ್ದಾಪುರ, ಯಲ್ಪಾರಟ್ಟಿ, ಖೇಮಲಾಪುರ ಸೇರಿದಂತೆ ನಾನಾ ಗ್ರಾಮಗಳ ರೈತರು ಸಭೆಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ