ಆ್ಯಪ್ನಗರ

ದಲ್ಲಾಳಿ, ರೈತರ ಮಧ್ಯೆ ಮಾರಾಮಾರಿ

ಬೈಲಹೊಂಗಲ (ಬೆಳಗಾವಿ): ಪಟ್ಟಣದ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ...

Vijaya Karnataka 15 Jan 2019, 5:00 am
ಬೈಲಹೊಂಗಲ (ಬೆಳಗಾವಿ) : ಪಟ್ಟಣದ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ಟೊಮ್ಯಾಟೋ ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ ದಲ್ಲಾಳಿಗಳು ಹಾಗೂ ರೈತರು ಪರಸ್ಪರ ಕಿತ್ತಾಡಿಕೊಂಡರು.
Vijaya Karnataka Web BEL-14HTP1


ಘಟನೆಯಲ್ಲಿ ಐವರು ರೈತರು ಹಾಗೂ ಐವರು ದಲ್ಲಾಳಿಗಳಿಗೆ ಗಾಯಗಳಾಗಿವೆ. ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದ ದಲ್ಲಾಳಿ, ರೈತರನ್ನು ಎಪಿಎಂಸಿ ಸಿಬ್ಬಂದಿ, ವ್ಯಾಪಾರಸ್ಥರು ಎಷ್ಟೇ ಬಿಡಿಸಲು ಯತ್ನಿಸಿದರೂ ಜಗಳ ನಿಯಂತ್ರಿಸಲಾಗಲಿಲ್ಲ. ದಲ್ಲಾಳಿಗಳಿಂದ ಹಲ್ಲೆಗೊಳಗಾದ ರೈತರು ಆಕ್ರೋಶಗೊಂಡು ದಲ್ಲಾಳಿಗಳ ವಾಹನದ ಚಕ್ರಗಳ ಗಾಳಿ ತೆಗೆದು ತರಕಾರಿ ತುಂಬಿದ ಟ್ರೇ, ಕಾಯಿಪಲ್ಲೆಗಳನ್ನು ಕಿತ್ತು ಬಿಸಾಡಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಸಿಬ್ಬಂದಿ ವಾತಾವರಣ ತಿಳಿಗೊಳಿಸಿದರು. ತರಕಾರಿ ಮಾರುಕಟ್ಟೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ನಂತರ ಪೊಲೀಸ್‌ ಠಾಣೆಯಲ್ಲಿ ಜಗಳ ಬಗೆಹರಿಸಲಾಯಿತು.

ಕರ ವಸೂಲಿ ಆರೋಪ :
ತರಕಾರಿ ಮಾರುಕಟ್ಟೆಯಲ್ಲಿ ಎಪಿಎಂಸಿಯವರು ರೈತರಿಂದ ದುಪ್ಪಟ್ಟು ಪ್ರಮಾಣದಲ್ಲಿ ಸಂತೆ ಕರ ವಸೂಲಿ ಮಾಡುತ್ತಿದ್ದಾರೆ. ರೈತರಿಗೆ ಯಾವುದೇ ರಸೀದಿ ನೀಡದೆ ತಮಗಿಷ್ಟ ಬಂದಂತೆ ಹಣ ಪಡೆಯುತ್ತಿದ್ದಾರೆ. ರೈತರು ಎಷ್ಟೇ ಕೇಳಿಕೊಂಡರೂ ಎಪಿಎಂಸಿ ಸಿಬ್ಬಂದಿ ಕರುಣೆ ತೋರದೆ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಈ ಕುರಿತು ಕೃಷಿ ಉತ್ಪನ್ನ ಮಾರುಕಟ್ಟೆಯ ಜಿಲ್ಲಾ ಕೃಷಿ ನಿರ್ದೇಶಕ ಕೆ.ಗುರುಪ್ರಸಾದ ಅವರನ್ನು ಸಂಪರ್ಕಿಸಿದಾಗ, ''ತರಕಾರಿ ಮಾರುಕಟ್ಟೆಯಲ್ಲಿ ಯಾವುದೇ ರೈತರು ಯಾರಿಗೂ ದುಡ್ಡು ಕೊಡುವ ಹಾಗಿಲ್ಲ. ಯಾರು ಖರೀದಿದಾರರು ಇರುತ್ತಾರೋ ಅವರು ಮಾತ್ರ ಬಳಕೆದಾರರ ಶುಲ್ಕ ತುಂಬಬೇಕಾಗುತ್ತದೆ. ರೈತರಿಂದ ಹಣ ಸುಲಿಗೆ ಮಾಡುತ್ತಿರುವ ಕುರಿತು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ