ಆ್ಯಪ್ನಗರ

ತಾಯಿ ಅಂತ್ಯ ಸಂಸ್ಕಾರಕ್ಕೆ ಹಣದ ಕೊರತೆ; ಆಸ್ಪತ್ರೆ ಶವಾಗಾರದೆದುರು 3 ದಿನ ಕಳೆದ ಮಕ್ಕಳು

ಬೆಳಗಾವಿ: ತಾಯಿಯ ಅಂತ್ಯ ಸಂಸ್ಕಾರದ ಖರ್ಚಿಗೆ ಹಣವಿಲ್ಲದ ...

Vijaya Karnataka 20 Oct 2020, 5:00 am
ಬೆಳಗಾವಿ: ತಾಯಿಯ ಅಂತ್ಯ ಸಂಸ್ಕಾರದ ಖರ್ಚಿಗೆ ಹಣವಿಲ್ಲದ ಕಾರಣ ಮಕ್ಕಳು ಮೂರು ದಿನ ಆಸ್ಪತ್ರೆ ಆವರಣದಲ್ಲೇ ಕಾದು ಕುಳಿತ ಕರುಣಾಜನಕ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
Vijaya Karnataka Web 19BGM2_52
ಹೆಲ್‌್ಫ ಫಾರ್‌ ನೀಡ್‌ ತಂಡದ ಸಹಾಯದಿಂದ ತಾಯಿ ಅಂತ್ಕಸಂಸ್ಕಾರ ನೆರವೇರಿಸಿದ ಮಕ್ಕಳು.


ಅನಾರೋಗ್ಯದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ತಾಲೂಕು ಗಣೇಶಪುರದ ಭಾರತಿ ಬಸ್ತವಾಡಕರ್‌(50) ಚಿಕಿತ್ಸೆ ಫಲಿಸದೆ ಅ. 16ರಂದು ಮೃತಪಟ್ಟಿದ್ದರು. ಆದರೆ, ಅಂತ್ಯಸಂಸ್ಕಾರಕ್ಕೆ ಹಣವಿಲ್ಲದ ಕಾರಣ ಮಕ್ಕಳಿಬ್ಬರು ಜಿಲ್ಲಾಸ್ಪತ್ರೆಯ ಶವಾಗಾರ ಎದುರು ಮೂರು ದಿನ ಕಳೆದಿದ್ದಾರೆ. ಈ ಕುರಿತು ಮಾಹಿತಿ ಪಡೆದ 'ಹೆಲ್ಪ್‌ ಫಾರ್‌ ನೀಡ್‌' ತಂಡದ ಸದಸ್ಯರು ಭಾನುವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಲು ಮಕ್ಕಳಿಗೆ ನೆರವಾಗಿದ್ದಾರೆ.

ಭಾರತಿ ಅವರಿಗೆ ಮೂವರು ಮಕ್ಕಳಿದ್ದು, ಅವರಲ್ಲಿ ಸೂರಜ್‌ ಮತ್ತು ಯುವರಾಜ ಬಸ್ತವಾಡಕರ್‌ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡಿದ್ದರಿಂದ ಇವರ ಬಳಿ ಹಣವಿರಲಿಲ್ಲ. ದಿಕ್ಕು ತೋಚದೆ ಇವರು ಸಹೋದರಿಯೊಂದಿಗೆ ಶವಾಗಾರ ಎದುರು ಮೂರು ದಿನ ಕಾಲ ಕಳೆದಿದ್ದಾರೆ.

'ಹೆಲ್ಪ್‌' ನೆರವು

''ಹೊಟ್ಟೆಯಲ್ಲಿನೀರು ತುಂಬಿ ನೋವು ಕಾಣಿಸಿಕೊಂಡಿದ್ದರಿಂದ ಭಾರತಿ ಬಸ್ತವಾವಾಡ್ಕರ್‌ ಅವರನ್ನು ಸೆ. 20ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈಕೆಯ ಮೂರೂ ಮಕ್ಕಳಿಗೂ ಹೆಲ್‌್ಫ ಫಾರ್‌ ನೀಡ್‌ ತಂಡದಿಂದಲೇ ಊಟೋಪಚಾರ ಮಾಡಲಾಗುತ್ತಿತ್ತು. ಈಗಾಗಲೇ ತಂಡದ ಸಹಾಯ ಪಡೆದಿದ್ದರಿಂದ ಅಂತ್ಯಸಂಸ್ಕಾರಕ್ಕೂ ಸಹಾಯ ಕೇಳುವುದು ಹೇಗೆ ಎನ್ನುವ ಹಿಂಜರಿಕೆಯಲ್ಲಿದ್ದ ಮಕ್ಕಳ ಮಾಹಿತಿ ಪಡೆದು ನೆರವಾಗಿದ್ದೇವೆ'', ಎನ್ನುತ್ತಾರೆ ಹೆಲ್ಪ್‌ ಫಾರ್‌ ನೀಡ್‌ ತಂಡದ ಸುರೇಂದ್ರ ಅನಗೋಳ್ಕರ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ