ಆ್ಯಪ್ನಗರ

ಸಿಡಿಲಿಗೆ ತೆಂಗಿನಮರಕ್ಕೆ ಬೆಂಕಿ

ಸವದತ್ತಿ: ಪಟ್ಟಣದಲ್ಲಿ ಸಂಜೆ ಪ್ರಾರಂಭವಾದ ಗುಡುಗು ಮತ್ತು ಸಿಡಿಲಿನ ಮಳೆ...

Vijaya Karnataka 9 Oct 2019, 5:00 am
ಸವದತ್ತಿ : ಪಟ್ಟಣದಲ್ಲಿಸಂಜೆ ಪ್ರಾರಂಭವಾದ ಗುಡುಗು ಮತ್ತು ಸಿಡಿಲಿನ ಮಳೆ ಜನರನ್ನು ಗಾಬರಿಗೊಳಿಸಿತು. ಪಟ್ಟಣದ ಪದಕಿ ಓಣಿಯ ಹಳೆಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿತು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ನವರಾತ್ರಿಯ ಬನ್ನಿ ಮುಡಿಯುವ ಸಂದರ್ಭದಲ್ಲಿಪ್ರಾರಂಭವಾದ ಬಿರುಸಿನ ಮಳೆ ಸೀಮೋಲ್ಲಂಘನ ಉತ್ಸವದ ಮೆರವಣಿಗೆಗೂ ಅಡಚಣೆ ಮಾಡಿತು. ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನದಲ್ಲಿಯೂ ನವರಾತ್ರಿ ಉತ್ಸವಕ್ಕೆ ಮಳೆರಾಯ ಅಡಚಣೆ ಮಾಡಿದ್ದಾನೆ. ಮಳೆಯಲ್ಲಿಯೇ ದೇವಸ್ಥಾನದ ಅರ್ಚಕರು ಮತ್ತು ಭಕ್ತರು ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿಸಿದರು.
Vijaya Karnataka Web 8SDT7_53

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ