ಆ್ಯಪ್ನಗರ

ಕಡಬಿ ತೋಟದ ಮನೆಗೆ ಬೆಂಕಿ: ಅಪಾರ ಹಾನಿ

ಕಡಬಿ: ಗ್ರಾಮದ ಸಮೀಪದಲ್ಲಿರುವ ತೋಟದಲ್ಲಿನ ಸೋಮಲಿಂಗ ಪುಂಡಲೀಕ ಮಾಳಕನವರ ಅವರ ...

Vijaya Karnataka 8 Apr 2019, 5:00 am
ಕಡಬಿ: ಗ್ರಾಮದ ಸಮೀಪದಲ್ಲಿರುವ ತೋಟದಲ್ಲಿನ ಸೋಮಲಿಂಗ ಪುಂಡಲೀಕ ಮಾಳಕನವರ ಅವರ ಮನೆಗೆ ಪಕ್ಕದ ತಿಪ್ಪೆಗೆ ಸುರಿಯಲಾಗಿದ್ದ ಬೂದಿಯಲ್ಲಿನ ಕೆಂಡದಿಂದ ಬೆಂಕಿ ಬಿದ್ದು ಮನೆ ಸಂಪೂರ್ಣ ಸುಟ್ಟು ಬೂದಿಯಾಗಿ ಅಪಾರ ನಷ್ಟ ಸಂಭವಿಸಿದೆ.
Vijaya Karnataka Web BEL-7KDB1


ಘಟನೆ: ಬೆಳಗ್ಗೆ ಮನೆಯ ಪಕ್ಕದಲ್ಲಿರುವ ತಿಪ್ಪೆ ಗುಂಡಿಯಲ್ಲಿ ಒಲೆಯ ಬೂದಿ ತಂದು ಹಾಕಲಾಗಿತ್ತು. ಬೂದಿಯಲ್ಲಿದ್ದ ಬೆಂಕಿಯ ಕಿಡಿ ಮನೆಗೆ ತಗುಲಿ ಬೆಂಕಿ ಕಾಣಿಸಿದೆ. ಮನೆಯಲ್ಲಿನ ಕೃಷಿಗೆ ಉಪಯೋಗಿಸುವ ಗಳೆಯ ಸಾಮಗ್ರಿಗಳು, ದವಸ ಧಾನ್ಯಗಳು, ಬಾಳೆ ಹಣ್ಣು ಮಾರಿದ 50 ಸಾವಿರ ಹಣ, ಗೃಹ ಬಳಕೆ ಸಾಮಾನುಗಳು, ಒಂದು ಬೈಕ್‌ ಸಂಪೂರ್ಣ ಸುಟ್ಟು ಹೋಗಿದೆ ಎಂದು ಬಾಲವ್ವ ಪುಂಡಲೀಕ ಮಾಳಕನವರ ತಿಳಿಸಿದ್ದಾರೆ.

ಮನೆಗೆ ಬೆಂಕಿ ಬಿದ್ದ ಕೂಡಲೆ ಅಕ್ಕಪಕ್ಕ ಯಾರು ಇರಲಿಲ್ಲ. ಹೊಲದಲ್ಲಿದ್ದ ಕೆಲವರು ಮನೆಗೆ ಬೆಂಕಿ ಹತ್ತಿದ್ದನ್ನು ಕಂಡು ತಕ್ಷ ಣ ಗೋಕಾಕ ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತಕ್ಷಣ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ