ಆ್ಯಪ್ನಗರ

ಬೇಡಕಿಹಾಳ ಕನ್ನಡ ಶಾಲೆಯಲ್ಲಿ 5 ದಶಕಗಳ ನಂತರ ರಾಷ್ಟ್ರಧ್ವಜಾರೋಹಣ!

ಬೋರಗಾಂವ: ಬೇಡಕಿಹಾಳದ ಶಾಂತಿಸಾಗರ ವೃತ್ತದಲ್ಲಿರುವ ಸರಕಾರಿ ಕನ್ನಡ ...

Vijaya Karnataka 16 Aug 2019, 7:38 am
ಬೋರಗಾಂವ: ಬೇಡಕಿಹಾಳದ ಶಾಂತಿಸಾಗರ ವೃತ್ತದಲ್ಲಿರುವ ಸರಕಾರಿ ಕನ್ನಡ ಶಾಲೆಯಲ್ಲಿ ಐದು ದಶಕಗಳ ನಂತರ ಗುರುವಾರ ರಾಷ್ಟ್ರ ಧ್ರಜಾರೋಹಣ ನಡೆಯಿತು.
Vijaya Karnataka Web BEL-15ICH2


ಇಲ್ಲಿ ಕನ್ನಡ ಗಂಡು ಮಕ್ಕಳ ಶಾಲೆ, ಕನ್ನಡ ಹೆಣ್ಣುಮಕ್ಕಳ ಶಾಲೆ, ಮರಾಠಿ ಮಾಧ್ಯಮ ಪ್ರಾಥಮಿಕ ಶಾಲೆ, ಉರ್ದು ಪ್ರಾಥಮಿಕ ಶಾಲೆ ಸೇರಿ 400ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಮೂವರು ಮುಖ್ಯೋಪಾಧ್ಯಾಯರು ಹಾಗೂ ಪ್ರತ್ಯೇಕ ಎಸ್‌.ಡಿ.ಎಂ.ಸಿ ಮಂಡಳಿ ಇದೆ. ಆದರೆ ಧ್ವಜಾರೋಹಣ ಮಾತ್ರ ಬೇರೆ ಶಾಲೆ ಎದುರು ನಡೆಯುತ್ತಿತ್ತು. ಗ್ರಾಮದ ಬೇರೆಡೆಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಧ್ವಜಾರೋಹಣಕ್ಕೆ ತಡವಾಗುತ್ತದೆ ಎಂಬ ಕಾರಣಕ್ಕೆ ಈ ಶಾಲೆ ಆವರಣದಲ್ಲಿ ಧ್ವಜಾರೋಹಣ ನಡೆಯುತ್ತಿರಲಿಲ್ಲ.

ಎಸ್‌ಡಿಎಂಸಿ ಅಧ್ಯಕ್ಷ ರಾದ ಅಶೋಕ ಸುಭೇದಾರ ಮತ್ತು ಬಂಡು ಚೌಗಲೆ ಕ್ರಮವಾಗಿ ಗಾಂಧಿ ಪ್ರತಿಮೆ ಪೂಜೆ, ಧ್ವಜಾರೋಹಣ ಮಾಡಿದರು. ಸಮಾರಂಭದಲ್ಲಿ ತಾಪಂ ಸದಸ್ಯ ಚಾಂದಸಾಬ ಮುಲ್ಲಾ, ಗ್ರಾಪಂ ಸದಸ್ಯ ಪ್ರಮೋದ ಪಾಟೀಲ, ದಿಲೀಪ ಹೆಗಡೆ, ಅಶೋಕ ಅರಗೆ, ಎಸ್‌.ಪಿ.ಸೂರ್ಯವಂಶಿ, ಎಸ್‌.ಎಸ್‌.ಪಾಂಡವ, ಎಸ್‌.ಐ.ಚವರಿ, ಎಸ್‌.ಬಿ.ಪಾಟೀಲ, ಎಂ.ಬಿ.ವಂಜೇರಿ, ಸೌಜನ್ಯ ಕೆ. ಸೇರಿದಂತೆ ಶಾಲೆಯ ಶಿಕ್ಷ ಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

'ವಿಕ' ವರದಿ ಮಾಡಿತ್ತು

ಇಲ್ಲಿ ಧ್ವಜಾರೋಹಣ ನಡೆಯದಿರುವ ಕುರಿತು ಜ. 27ರಂದು 'ವಿಕ' ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಶಾಲೆಯ ಮುಖ್ಯಾಧ್ಯಾಪಕ ಎಸ್‌.ಎ.ಚೌಗುಲೆ, ಬೇಡಕಿಹಾಳ ಗ್ರಾಪಂ ಅಧಿಕಾರಿಗಳು, ಎಸ್‌ಡಿಎಂಸಿ ಆಡಳಿತ ಮಂಡಳಿ ಜು.29ರಂದು ನಡೆದ ಮೊದಲ ಗ್ರಾಮಸಭೆಯಲ್ಲಿ ಠರಾವು ಮಂಡಿಸಿ, ಅದಕ್ಕೆ ಅಧಿಕೃತ ಮಂಜೂರಿ ಪಡೆದು, ಗುರುವಾರ ಧ್ವಜಾರೋಹಣ ನೆರವೇರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ