ಆ್ಯಪ್ನಗರ

ಉಡಾನ್‌ ವಿಮಾನ ಹಾರಾಟ ಆರಂಭ

ಬೆಳಗಾವಿ ಕೇಂದ್ರ ಸರಕಾರದ ಉಡಾನ್‌ ಯೋಜನೆಯಲ್ಲಿ ಹೈದ್ರಾಬಾದ್‌-ಬೆಳಗಾವಿ ನಡುವೆ ವಿಮಾನ ಹಾರಾಟ ...

Vijaya Karnataka 2 May 2019, 5:00 am
ಬೆಳಗಾವಿ: ಕೇಂದ್ರ ಸರಕಾರದ ಉಡಾನ್‌ ಯೋಜನೆಯಲ್ಲಿ ಹೈದ್ರಾಬಾದ್‌-ಬೆಳಗಾವಿ ನಡುವೆ ವಿಮಾನ ಹಾರಾಟ ಬುಧವಾರ ವಿಧ್ಯುಕ್ತವಾಗಿ ಆರಂಭಗೊಂಡಿತು.
Vijaya Karnataka Web BLG-0105-2-52-1RAJU-6


ಹೈದ್ರಾಬಾದ್‌ನಿಂದ 53 ಪ್ರಯಾಣಿಕರನ್ನು ಹೊತ್ತು 78 ಆಸನಗಳ ಸ್ಪೈಸ್‌ ಜೆಟ್‌ ವಿಮಾನ ಬುಧವಾರ ಸಂಜೆ 5.15ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅದಕ್ಕೆ ನಿಲ್ದಾಣದ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಾಗತಿಸಿದರು. ಬಲೂನ್‌ ಕಟ್ಟಿ, ಕೇಕ್‌ ಕತ್ತರಿಸಿ ಹಂಚುವ ಮೂಲಕ ಹರ್ಷ ವ್ಯಕ್ತಪಡಿಸಿದರು. ನಿಲ್ದಾಣದ ಮುಖ್ಯಸ್ಥ ರಾಜೇಶ್‌ಕುಮಾರ್‌ ಮೌರ್ಯ ಮತ್ತು ಟರ್ಮಿನಲ್‌ ಅಧಿಕಾರಿಗಳು ಸ್ಪೈಸ್‌ಜೆಟ್‌ನ ಸಿಬ್ಬಂದಿ ಜತೆಗೆ ಪ್ರಯಾಣಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

25 ನಿಮಿಷಗಳ ಕಾಲ ನಿಲ್ದಾಣದಲ್ಲಿದ್ದ ವಿಮಾನ 5.55ಕ್ಕೆ ಮತ್ತೆ ಹೈದ್ರಾಬಾದ್‌ಗೆ ಹಾರಿತು. 58 ಜನ ಇಲ್ಲಿಂದ ಪ್ರಯಾಣ ಮಾಡಿದರು. ಇವರಿಗೂ ಆತ್ಮೀಯವಾಗಿ ಬೀಳ್ಕೊಡಲಾಯಿತು. ಇಂದು ಒಬ್ಬರಿಗೆ 2,450 ರೂ. ಟಿಕೆಟ್‌ ದರವಿತ್ತು.

ಉಡಾನ್‌ ವಿಮಾನ ಹಾರಾಟ ಆರಂಭವಾಗುವುದರೊಂದಿಗೆ ಬೆಳಗಾವಿಗರ ಬಹುದಿನಗಳ ಕನಸು ನನಸಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ