ಆ್ಯಪ್ನಗರ

ಪಂಚಗಂಗಾ ತೀರದಲ್ಲಿ ಪ್ರವಾಹ ಆತಂಕ

ಇಚಲಕರಂಜಿ: ಕೊಲ್ಲಾಪುರ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪಂಚಗಂಗಾ ನದಿ ನೀರಿನ ಮಟ್ಟ ಮತ್ತಷ್ಟು ...

Vijaya Karnataka 17 Jul 2018, 5:00 am
ಇಚಲಕರಂಜಿ: ಕೊಲ್ಲಾಪುರ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪಂಚಗಂಗಾ ನದಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ. ನದಿ ನೀರು ಅಪಾಯದ ಮಟ್ಟ ತಲುಪಲು ಇನ್ನು 4 ಅಡಿ ಮಾತ್ರ ಬಾಕಿ ಇದ್ದು ಸ್ಥಳೀಯ ಆಡಳಿತ ಅಗತ್ಯ ಸುರಕ್ಷ ತಾ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ ನದಿ ತೀರದ ಜನರಿಗೆ ಮುನ್ನೆಚ್ಚರಿಗೆ ನೀಡಲಾಗಿದೆ.
Vijaya Karnataka Web BEL-16ICH6


ನದಿ ದಡದಲ್ಲಿರುವ ಮಹಾದೇವ ಮಂದಿರ ಹಾಗೂ ವರದ ವಿನಾಯಕ ಮಂದಿರ ನೀರಿನಲ್ಲಿ ಮುಳುಗಿದೆ. ಪಂಚಗಂಗಾ ನದಿಗೆ ನಿರ್ಮಿಸಿದ ಕೆಳ ಹಂತದ 65 ಸೇತುವೆಗಳು ಮುಳುಗಡೆಯಾಗಿವೆ. ವಾರಣಾ, ಹಾಗೂ ರಾಧಾನಗರಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು ವೇದಗಂಗಾ, ದೂಧಗಂಗಾ, ವಾರಣಾ ನದಿ ನೀರು ಹಲವು ಕಡೆ ಜನ ವಸತಿ ಪ್ರದೇಶಗಳಿಗೆ ನುಗ್ಗಿದೆ. ಹಲವು ಕಡೆ ರಸ್ತೆ ಸಂಚಾರ ಸ್ಥಗಿತವಾಗಿದೆ. ಸಂಭವನೀಯ ಪ್ರವಾಹ ಸ್ಥಿತಿ ಎದುರಿಸಲು ಯಾಂತ್ರಿಕ ಬೋಟ್‌, ರೆಸ್ಕ್ಯೂ ಫೋರ್ಸ್‌ ಸಿದ್ಧಗೊಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ