ಆ್ಯಪ್ನಗರ

ತಿಂಗಳು ಕಳೆದರೂ ಮುಗಿಯದ ನೆರೆ ಹಾನಿ ಸಮೀಕ್ಷೆ

ಬಸವರಾಜ ಕೊಂಡಿ ಹುಕ್ಕೇರಿ ಪ್ರವಾಹ ಮುಗಿದು ...

Vijaya Karnataka 21 Sep 2019, 5:00 am
ಬಸವರಾಜ ಕೊಂಡಿ ಹುಕ್ಕೇರಿ
Vijaya Karnataka Web 20 HUKKERI 01 STORY PHOTO_53

ಪ್ರವಾಹ ಮುಗಿದು ಒಂದು ತಿಂಗಳು ಗತಿಸುತ್ತಿದ್ದರೂ ಮುಳುಗಡೆಯಾದ ಕ್ಷೇತ್ರಗಳ ಸರ್ವೆ ಕಾರ್ಯ ಇನ್ನೂ ಮುಗಿದಿಲ್ಲ. ಹೀಗಾಗಿ ಪರಿಹಾರವೂ ಸಿಗುತ್ತಿಲ್ಲ.

ಭಾಗಶಃ ಮನೆಗಳು ಕುಸಿದು ನಿರಾಶ್ರಿತರಾದವರು ಮನೆ ಗೋಡೆ ಕಟ್ಟಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ.

ಆಗಸ್ಟ್‌ ತಿಂಗಳಿನಲ್ಲಿನಿರಂತರ 20 ದಿನ ಮಳೆರಾಯನ ರುದ್ರನರ್ತನಕ್ಕೆ ಘಟಪ್ರಭಾ, ಹಿರಣ್ಯಕೇಶಿ ನದಿ ಹಾಗೂ ಮಾರ್ಕಂಡೇಯ ನದಿಗಳ ಪ್ರವಾಹಕ್ಕೆ ಹಲವಾರು ಹಳ್ಳಿಗಳ ಮನೆಗಳು ನೆಲಸಮವಾಗಿವೆ. ಬೆಳೆಗಳು ನೀರುಪಾಲಾಗಿದ್ದು ರಸ್ತೆಗಳು ಕೂಡ ಚರಂಡಿಯಂತಾಗಿವೆ. ಆದರೂ ಇಲ್ಲಿಯವರೆಗೆ ಸರಿಯಾಗಿ ಸರಕಾರದಿಂದ ಸ್ಪಂದನೆ ದೊರೆಯುತ್ತಿಲ್ಲಎಂಬುದು ಸಂತ್ರಸ್ತರ ಅಳಲು.

ತಾಲೂಕಿನಲ್ಲಿ4163ಜನ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಇಲ್ಲಿಯವರಿಗೆ ಸರಕಾರ 4.62ಕೋಟಿ ಅನುದಾನ ನೀಡಿದೆ. ಅದರಲ್ಲಿಗೋಡೆ ಕುಸಿತದಿಂದ ಮೂವರು ಮೃತ ವ್ಯಕ್ತಿಗಳಿಗೆ ತಲಾ 5 ಲಕ್ಷ ರೂ., ಜಾನುವಾರು ಸೇರಿದಂತೆ ಇತರ ಹಾನಿಗೆ 4.27ಕೋಟಿ ಪರಿಹಾರವನ್ನು ಸಂತ್ರಸ್ತರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲಾಗಿದೆ. ತಾಂತ್ರಿಕ ದೋಷದಿಂದ 35ಲಕ್ಷ ರೂ. ಉಳಿದುಕೊಂಡಿದ್ದು 10 ಸಾವಿರ ರೂ. ಪರಿಹಾರವನ್ನು ಚೆಕ್‌ ಮೂಲಕ ನೀಡಲಾಗಿದೆ.

ಈಗಾಗಲೇ ಅಧಿಕಾರಿಗಳು ಹಾನಿಯ ವರದಿ ನೀಡಿದ್ದರೂ ಪರಿಹಾರ ಬರುವ ಮುನ್ನ ಮನೆ ಕಟ್ಟಿಕೊಳ್ಳುವಂತಿಲ್ಲ. ಹಂತಹಂತವಾಗಿ ನಿರ್ಮಿಸಿದ ಮನೆಯ ಫೋಟೊಗಳನ್ನು ನೀಡಿದಾಗ ಹಣದ ಬಿಡುಗಡೆಯೂ ಹಲವು ಹಂತಗಳಲ್ಲೇ ನಡೆಯುವುದರಿಂದ ಈಗಾಗಲೇ ಕುಸಿದ ಗೋಡೆಗಳನ್ನು ನಿರ್ಮಿಸಿಕೊಳ್ಳಲಾಗದೆ ಸಂತ್ರಸ್ತರು ತೊಳಲಾಡುತ್ತಿದ್ದಾರೆ.

ಬೆಳೆ ಹಾನಿಯ ಸ್ಥಿತಿಯೂ ಇದೇ ಆಗಿದೆ. ಹೊಸದಾಗಿ ಹೊಲದಲ್ಲಿಬಿತ್ತನೆ ಮಾಡಿದರೆ ಸಮೀಕ್ಷೆ ವೇಳೆ ಹಾನಿಯ ಅಂದಾಜು ಸಿಗುವುದಿಲ್ಲ. ಪರಿಹಾರವೂ ಬರುವುದಿಲ್ಲ. ಹೀಗಾಗಿ ನೆರೆ ಇಳಿದು ಹೋದರೂ ಮರು ಬಿತ್ತನೆ ಮಾಡದೆ ಕುಳಿತುಕೊಳ್ಳುವಂತಾಗಿದೆ. ಶೀಘ್ರ ಸರ್ವೇ ಕಾರ್ಯ ಪ್ರಾರಂಭಿಸಿ ರೈತರಿಗೆ ಮುಂದಿನ ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕು ಎಂಬುದು ರೈತರ ಒತ್ತಾಯವಾಗಿದೆ.

ವಿದ್ಯುತ್‌ ಸಹಕಾರಿ ಸಂಘಕ್ಕೆ ಭಾರೀ ನಷ್ಟ:
ತಾಲೂಕಿನಲ್ಲಿನದಿ ದಂಡೆಗಳಲ್ಲಿದ್ದ ಟ್ರಾನ್ಸ್‌ಫಾರ್ಮರ್‌ಗಳು, ಪಂಪ್‌ಸೆಟ್‌ಗಳು ಅಪಾರ ಪ್ರಮಾಣದಲ್ಲಿಸುಟ್ಟುಹೋಗಿವೆ. ಇಲ್ಲಿನ ವಿದ್ಯುತ್‌ ಸಹಕಾರಿ ಕೂಡ ಈಗಾಗಲೇ 10 ಕೋಟಿಯಷ್ಟು ಹಾನಿ ಅನುಭವಿಸಿದ್ದು ಇಷ್ಟೆಲ್ಲಮೊತ್ತದ ಹಾನಿ ಭರಿಸುವ ಶಕ್ತಿ ಅದಕ್ಕಿಲ್ಲ. ಹೀಗಾಗಿ ಹೆಸ್ಕಾಂ, ಬೆಸ್ಕಾಂಗಳಿಗೆ ನೀಡಿದಂತೆ ಸರಕಾರ ಇದಕ್ಕೂ ಪರಿಹಾರ ಧನ ಒದಗಿಸಬೇಕೆಂದು ಕೋರಲಾಗಿದೆ.

ನಾನು ಶಾಸಕನಾಗಿ 38 ವರ್ಷಗಳಲ್ಲಿಇಂಥ ಭೀಕರ ಅತಿವೃಷ್ಟಿ ಪ್ರವಾಹ ಕಂಡಿಲ್ಲ. ಜನರಿಗೆ ಆಗಿರುವ ಸಮಸ್ಯೆಗಳ ಪರಿಹಾರಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.
-ಉಮೇಶ ಕತ್ತಿ, ಶಾಸಕರು.

ಸರಕಾರದ ಆದೇಶಗಳನ್ನು ಪಾಲಿಸಲಾಗುತ್ತಿದೆ. ನಮಗೂ ಸಂಪೂರ್ಣವಾಗಿ ನಷ್ಟದ ಮಾಹಿತಿ ಬಂದಿಲ್ಲ. ಸರಕಾರದ ನಿರ್ದೇಶನದಂತೆ 10 ಸಾವಿರ ರೂ. ನಂತೆ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.
- ರೇಷ್ಮಾ ತಾಳಿಕೋಟೆ, ತಹಸೀಲ್ದಾರ್‌, ಹುಕ್ಕೇರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ