ಆ್ಯಪ್ನಗರ

ಬೆಳಗಾವಿಯಲ್ಲಿ ಪ್ರವಾಹ ಸ್ಥಿತಿ: ನಗರದಲ್ಲಿ ಬೋಟ್‌ ಸಂಚಾರ

ಬೆಳಗಾವಿ ಮಹಾನಗರವನ್ನು ಕುಂಭದ್ರೋಣ ಮಳೆ ಬಹುತೇಕ ನೀರಿನಲ್ಲಿ ಮುಳುಗಿಸಿದ್ದು, ಜನಜೀವನ ಅಪಾಯಕ್ಕೆ ಸಿಲುಕಿದೆ.

Vijaya Karnataka 8 Aug 2019, 8:13 am
ಬೆಳಗಾವಿ: ಬೆಳಗಾವಿ ಮಹಾನಗರವನ್ನು ಕುಂಭದ್ರೋಣ ಮಳೆ ಬಹುತೇಕ ನೀರಿನಲ್ಲಿ ಮುಳುಗಿಸಿದ್ದು, ಜನಜೀವನ ಅಪಾಯಕ್ಕೆ ಸಿಲುಕಿದೆ. ತಗ್ಗು ಪ್ರದೇಶ ಮತ್ತು ನೀರು ಆವರಿಸಿರುವ ಬಡಾವಣೆಗಳ ಜನರ ರಕ್ಷಣೆಗೆ ರಬ್ಬರ್‌ ಬೋಟ್‌ಗಳನ್ನು ಬಳಸಲಾಗುತ್ತಿದೆ.
Vijaya Karnataka Web boat


ಶಿವಾಜಿನಗರ, ವೀರಭದ್ರನಗರ, ಶಾಸ್ತ್ರಿ ನಗರ, ಜಕ್ಕೇರಿ ಹೊಂಡ ಪ್ರದೇಶದಲ್ಲಿ ಬೋಟ್‌ಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಅಭಯ ಪಾಟೀಲ ತಂಡದೊಂದಿಗೆ ತ್ವರಿತಗತಿಯ ಕಾರ್ಯಾಚರಣೆಗೆ ಇಳಿದಿದ್ದಾರೆ.

ಶಾಸ್ತ್ರಿನಗರ ಮತ್ತು ಇತರ ಬಡಾವಣೆಗಳಲ್ಲಿ 2 ಬೋಟ್‌ಗಳನ್ನು ಬಿಟ್ಟು 17ಕ್ಕೂ ಹೆಚ್ಚು ಕುಟುಂಬಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿದರು. ಇವರಿಗೆಲ್ಲ ಸಾಯಿಭವನ, ಜಯವಂತಿ ಮಂಗಲಕಾರ್ಯಾಲಯ, ಮಲ್ಲಿಕಾರ್ಜುನ ದೇವಸ್ಥಾನ. ಸುಖಶಾಂತಿ ಭವನ, ಕೈವಲ್ಯಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. 3ಸಾವಿರ ಪುಲಾವ್‌ ಪ್ಯಾಕೆಟ್‌ಗಳನ್ನು ಸಿದ್ಧಪಡಿಸಿ ಪೂರೈಕೆ ಮಾಡಲಾಗಿದೆ.

ರೈಲ್ವೆ ಬ್ರಿಜ್‌ ಬಳಿ ಕೆರೆಯಂತೆ ನೀರು ನಿಂತಿರುವುದರಿಂದ ರೈಲು ಸಂಚಾರಕ್ಕೂ ತಾಪತ್ರಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ