ಆ್ಯಪ್ನಗರ

ಪ್ರವಾಹ: ಶಾಶ್ವತ ಸ್ಥಳಾಂತರಕ್ಕೆ ಆಗ್ರಹ

ರಾಮದುರ್ಗ: ಪ್ರವಾಹದ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ದಂಡೆಯ ಮೇಲಿರುವ ...

Vijaya Karnataka 20 Aug 2019, 5:00 am
ರಾಮದುರ್ಗ: ಪ್ರವಾಹದ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ದಂಡೆಯ ಮೇಲಿರುವ ಪಟ್ಟಣದ ಪುರಸಭೆಯ 13ನೇ ವಾರ್ಡ್‌ ವ್ಯಾಪ್ತಿಯ ತೇರಬಜಾರ, ಯನಾಮಪೇಟೆ, ಕಾಗೆ ಓಣಿಯ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಶಾಶ್ವತವಾಗಿ ಸ್ಥಳಾಂತರಿಸಬೇಕೆಂದು ಇಲ್ಲಿನ ನಾಗರಿಕರೆಲ್ಲರೂ ಪಟ್ಟಣದಲ್ಲಿ ಸೋಮವಾರ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-18RD2


'ಈ ಮೂರು ಬಡಾವಣೆಗಳಲ್ಲಿ ಸುಮಾರು 3 ಸಾವಿರ ಕುಟುಂಬಗಳು ವಾಸವಾಗಿವೆ. ನದಿ ದಂಡೆಯ ಮೇಲೆ ಇರುವುದರಿಂದ ಪ್ರವಾಹ ಬಂದಾಗಲೆಲ್ಲ ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತ ಬಂದಿದ್ದೇವೆ. ಈ ಬಾರಿ ಪ್ರವಾಹದಿಂದ ಮನೆಗಳೆಲ್ಲವೂ ನೆಲಸಮವಾಗಿವೆ. ವಿಷ ಜಂತುಗಳ ಉಪಟಳದಿಂದ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಹಾಗಾಗಿ ಇಲ್ಲಿನ ಜನರನ್ನು ಶಾಶ್ವತವಾದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು', ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸ್ವೀಕರಿಸಿದ ತಹಸೀಲ್ದಾರ ಬಸನಗೌಡ ಕೋಟೂರ, ಈ ಮನವಿಯನ್ನು ಜಿಲ್ಲಾಧಿಕಾರಿಗೆ ರವಾನಿಸಿ ಮುಂದಿನ ಕ್ರಮ ಜರುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು. ಈರಣ್ಣ ಕೊಣ್ಣೂರ, ಅಪ್ಪಣ್ಣ ಬಾಡಗಾರ, ಅರುಣ ಬಾಳಿಕಾಯಿ, ಮಂಜುನಾಥ ಹಡಪದ, ಕೀರ್ತಿ ಭಾವಿಕಟ್ಟಿ, ರಮೇಶ ಪತ್ತಾರ, ಮಂಜುನಾಥ ಬೆಲ್ಲದ, ಬಸವರಾಜ ಯಳಗಂಟಿ, ಸುನಿಲ ಹರಗೋಲ, ಪ್ರಭಾ ಪುಟಾಣಿ, ಲತಾ ಕೊಣ್ಣೂರ, ಮಹಾದೇವಿ ಭಾವಿಕಟ್ಟಿ, ವೀಣಾ ಪತ್ತಾರ, ಗೀತಾ ಯಳಗಂಟಿ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ