ಆ್ಯಪ್ನಗರ

ಬ್ಯಾಂಕ್‌ ಎದುರು ಸೇರಿ ಅಳಲು ಹೇಳಿಕೊಂಡ ಜುಗೂಳದ ನಿರಾಶ್ರಿತರು

ಕಾಗವಾಡ: ನೆರೆ ಪರಿಹಾರದ ಚೆಕ್‌ ನೀಡಿ 20 ದಿನಗಳಾದರೂ ಇನ್ನೂ ...

Vijaya Karnataka 19 Sep 2019, 5:00 am
ಕಾಗವಾಡ: ನೆರೆ ಪರಿಹಾರದ ಚೆಕ್‌ ನೀಡಿ 20 ದಿನಗಳಾದರೂ ಇನ್ನೂ ಖಾತೆಗೆ ಹಣ ಜಮಾ ಆಗಿಲ್ಲಎಂದು ಆರೋಪಿಸಿದ ಜುಗೂಳ ಗ್ರಾಮದ ನೂರಾರು ಸಂತ್ರಸ್ತರು ಬುಧವಾರ ಸಿಂಡಿಕೇಟ್‌ ಬ್ಯಾಂಕ್‌ ಶಾಖೆ ಎದುರು ಸೇರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
Vijaya Karnataka Web 18 KAGWAD 3 NEWS PHOTO_53


ತಾಪಂ ಮಾಜಿ ಸದಸ್ಯ ಈಶ್ವರ ಘಾಟಗೆ, ಪಾರ್ವತಿ ಕೆಸ್ತೆ, ಭೂಪಾಲ ಖುರಪೆ, ಜೈಪಾಲ್‌ ಯಮಕನಮರಡಿ ಇತರರು ಮಾತನಾಡಿ, ನೆರೆಯಿಂದ ನಾವು ಆಸ್ತಿ ಕಳೆದುಕೊಂಡಿದ್ದೇವೆ. ಬೆಳೆ ನಾಶವಾಗಿವೆ. ಅಧಿಕಾರಿಗಳು, ರಾಜಕೀಯ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ ಆಶ್ವಾಸನೆ ನೀಡಿ ತೆರಳಿದ್ದಾರೆ. ಪರಿಹಾರವಾಗಿ ನೀಡಿದ ಚೆಕ್‌ನ ಹಣ ಇನ್ನೂ ಖಾತೆಗೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ವೆ ಕಾರ್ಯದಲ್ಲಿತಾರತಮ್ಯ:
ಜುಗೂಳ ಗ್ರಾಮಕ್ಕೆ ಭೇಟಿ ನೀಡಿದ್ದ ತಹಸೀಲ್ದಾರರು ಸೇರಿದಂತೆ ಇತರ ಅಧಿಕಾರಿಗಳು ಮನೆ ಹಾನಿ ಸಮೀಕ್ಷೆ ಮಾಡಿದ್ದಾರೆ. ಮನೆಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದರೂ ಭಾಗಶಃ ಎಂದು ಉಲ್ಲೇಖಿಸಿದ್ದಾರೆ. ಅಧಿಕಾರಿಗಳು ಸರ್ವೆಯಲ್ಲಿತಾರತಮ್ಯ ಮಾಡುತ್ತಿದ್ದಾರೆ. ಹೀಗಾಗಿ ಮರು ಸರ್ವೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಂತ್ರಿಕ ಸಮಸ್ಯೆಯಿಂದ ತೊಂದರೆ:
ಜುಗೂಳ ಗ್ರಾಮದ ಸಿಂಡಿಕೇಟ್‌ ಬ್ಯಾಂಕ್‌ ಶಾಖೆ ನೀರಿನಲ್ಲಿಮುಳುಗಡೆಯಾಗಿದ್ದರಿಂದ ಇಂಟರ್‌ನೆಟ್‌ ಸೇವೆ ಸ್ಥಗಿತವಾಗಿ ಸಾಕಷ್ಟು ಸಮಸ್ಯೆಯಾಗಿದೆ. ಅಲ್ಲದೇ ಕಂದಾಯ ಇಲಾಖೆ ನೀಡಿರುವ ಪರಿಹಾರದ ಚೆಕ್‌ಗಳು ರಾಷ್ಟ್ರೀಕೃತ ಬ್ಯಾಂಕ್‌ಗಳದ್ದಲ್ಲ. ಹೀಗಾಗಿ ಅಕೌಂಟ್‌ ಪೇ ಮಾಡಲು ವಿಳಂಬವಾಗುತ್ತಿದೆ. ಚಿಕ್ಕೋಡಿ ಹಾಗೂ ಕಾಗವಾಡ ಶಾಖೆಯಿಂದ ಹಣ ನೀಡುವ ವ್ಯವಸ್ಥೆ ಮಾಡಲಾಗಿದೆ. ಶನಿವಾರದ ವರೆಗೆ ಎಲ್ಲರಿಗೂ ಹಣ ನೀಡಲಾಗುವುದು ಎಂದು ಶಾಖಾ ವ್ಯವಸ್ಥಾಪಕ ಎಂ.ಎಂ.ಬಾಡಕರ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ