ಆ್ಯಪ್ನಗರ

ಪರಿಹಾರಕ್ಕೆ ಆಗ್ರಹಿಸಿ ನೆರೆ ಸಂತ್ರಸ್ತರ ಪ್ರತಿಭಟನೆ

ಬೆಳಗಾವಿ : ಪ್ರವಾಹ ಹಾಗೂ ಮಳೆಯಲ್ಲಿಮನೆ ಕಳೆದುಕೊಂಡ ...

Vijaya Karnataka 19 Oct 2019, 5:00 am
ಬೆಳಗಾವಿ: ಪ್ರವಾಹ ಹಾಗೂ ಮಳೆಯಲ್ಲಿಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಶುಕ್ರವಾರ ಬೈಲಹೊಂಗಲ ತಾಲೂಕಿನ ಬಿದರಗಡ್ಡಿ ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಪ್ರತಿಭಟನೆ ನಡೆಸಿದರು.
Vijaya Karnataka Web 18 LBS 3_53


ಬೈಲಹೊಂಗಲ ತಾಲೂಕಿನ ಬುಡಕರಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಗಡ್ಡಿ ಗ್ರಾಮದಲ್ಲಿಭಾರೀ ಮಳೆಗೆ ಮನೆಗಳು ನೆಲಕ್ಕೆ ಬಿದ್ದಿವೆ. ಕಳೆದ ಎರಡು ತಿಂಗಳಿಂದ 50ಕ್ಕೂ ಹೆಚ್ಚು ಕುಟುಂಬಗಳು ಶೆಡ್‌ನಲ್ಲಿಬದುಕು ಸಾಗಿಸುತ್ತಿವೆ. ಈ ಕುಟುಂಬಗಳಿಗೆ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಪರಿಹಾರ ನೀಡುವಂತೆ ಸ್ಥಳೀಯ ಅಧಿಕಾರಿಗಳನ್ನು ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾನಿ ಮತ್ತು ಬಿದ್ದಿರುವ ಮನೆಗಳ ಸಮೀಕ್ಷೆಯೂ ಸರಿಯಾಗಿ ನಡೆದಿಲ್ಲ. ಸಂಪೂರ್ಣ ಬಿದ್ದಿರುವ ಕೆಲ ಮನೆಗಳನ್ನು ಸಿ ಕೆಟಗೇರಿಯಲ್ಲಿಹಾಕಲಾಗಿದೆ. ಹಾನಿಯಾದ ಮನೆಗಳನ್ನು ಎ ಮತ್ತು ಬಿ ಕೆಟಗೇರಿ ಹಾಕಲಾಗಿದೆ. ಕಾರಣ ಕೂಡಲೇ ಮತ್ತೊಮ್ಮೆ ಸರಿಯಾದ ಸಮೀಕ್ಷೆ ಮಾಡಬೇಕು. ಅರ್ಹ ಸಂತ್ರಸ್ತರನ್ನು ಗುರುತಿಸಿ ತಕ್ಷಣ ಪರಿಹಾರ ನೀಡಬೇಕು. ಸಮೀಕ್ಷೆಯಲ್ಲಿತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ಶಿವಾನಂದ ಕುರಿ, ಸಿದ್ದಪ್ಪ ಮೂಗಬಸವ, ನಾಗಪ್ಪ ಪೂಜೇರಿ, ದುರ್ಗಪ್ಪ ಪೂಜೇರಿ, ಬಿ.ಎನ್‌. ಕುರಿ, ಮಲ್ಲಪ್ಪ ಜಿರಿಗಿ, ಯಲ್ಲಪ್ಪ ಕುರಿ, ಅಡಿವೆಪ್ಪ ಕುರಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ