ಆ್ಯಪ್ನಗರ

ವಿದ್ಯುತ್‌ ಸ್ಪರ್ಷದಿಂದ ಬೆಂಕಿ ತಗುಲಿ ಮೇವು ಭಸ್ಮ

ಯಮಕನಮರಡಿ: ಟ್ರ್ಯಾಕ್ಟರ್‌ನಲ್ಲಿ ಸಾಗಿಸಲಾಗುತ್ತಿದ್ದ ...

Vijaya Karnataka 20 Dec 2019, 5:00 am
ಯಮಕನಮರಡಿ: ಟ್ರ್ಯಾಕ್ಟರ್‌ನಲ್ಲಿಸಾಗಿಸಲಾಗುತ್ತಿದ್ದ ಮೇವಿನ ಹೊರೆಗೆ ವಿದ್ಯುತ್‌ ತಂತಿ ತಗುಲಿ ಸಂಭವಿಸಿದ ಅನಾಹುತದಲ್ಲಿಸಂಪೂರ್ಣ ಮೇವು ಸುಟ್ಟು ಭಸ್ಮವಾಗಿದೆ.
Vijaya Karnataka Web 19YMD2_53
ಬಿಳಿ ಜೋಳದ ಮೇವಿನ ಹೊರೆಗೆ ಬೆಂಕಿಗೆ ಹತ್ತಿರುವುದು.


ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಪಂ ವ್ಯಾಪ್ತಿಗೆ ಬರುವ ಬೋಶ್ಯಾನಹಟ್ಟಿ ಗ್ರಾಮದ ಮಲ್ಲಪ್ಪ ಬಸಪ್ಪ ಭುಜಪ್ಪಗೋಳ ಅವರ ಹೊಲದಲ್ಲಿನ ಬಿಳಿ ಜೋಳ ಒಣ ಮೇವುನ್ನು ಗುರುವಾರ ಟ್ಯಾಕ್ಟರ್‌ನಲ್ಲಿಹೇರಿಕೊಂಡು ಮನೆಗೆ ಸಾಗಿಸಲಾಗುತ್ತಿತ್ತು.

ಈ ವೇಳೆ ಗ್ರಾಮದ ವ್ಯಕ್ತಿಯೊಬ್ಬರ ಮನೆಯ ವಿದ್ಯುತ್‌ ತಂತಿ ತುಂಡಾಗಿ ಮೇವಿಗೆ ಬೆಂಕಿ ಹತ್ತಿಕೊಂಡಿತು. ಟ್ಯಾಕ್ಟರ್‌ನಲ್ಲಿದ್ದ 500 ಸೂಡ ಮೇವು ಸಂಪೂರ್ಣ ಸುಟ್ಟು ಕರಕಲಾಯಿತು.

ಅಗ್ನಿಶಾಮಕ ದಳದವರು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಇನ್ನೂ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ