ಆ್ಯಪ್ನಗರ

ಎಲ್ಲ ವಿಜ್ಞಾನಗಳಿಗೂ ಜಾನಪದವೇ ಮೂಲ

-ಡಿಬಿ...

Vijaya Karnataka 17 Aug 2018, 5:00 am
ಬೆಳಗಾವಿ: ಜನರಲ್ಲಿನ ಮೂಢನಂಬಿಕೆ ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ಬೆಳೆಸಲು ಜಾನಪದವು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿದೆ ಎಂದು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಿ.ಬಿ. ನಾಯಕ ಅಭಿಪ್ರಾಯ ಪಟ್ಟರು.
Vijaya Karnataka Web BLG-1608-2-52-16PRAMOD9


ಡಾ. ನಾಗಲೋಟಿಮಠ ವಿಜ್ಞಾನ ಕೇಂದ್ರ ಸಹಯೋಗದಲ್ಲ್ಲಿ ವಿಜ್ಞಾನ ಪದವೀಧರರು, ಶಿಕ್ಷ ಕರು, ಶಿಕ್ಷ ಣ ಮಹಾವಿದ್ಯಾಲಯಗಳ ಪ್ರಶಿಕ್ಷ ಣಾರ್ಥಿಗಳಿಗೆ ಆಯೋಜಿಸಿರುವ ಐದು ದಿನಗಳ 'ಜಾನಪದ ಮಾಧ್ಯಮಗಳ ಮೂಲಕ ವಿಜ್ಞಾನ ಸಂವಹನ' ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ವಿಜ್ಞಾನಗಳ ಮೂಲ ಜಾನಪದವೇ ಆಗಿದೆ. ಆದರೆ, ಅನಕ್ಷ ರು, ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡದ, ಹೆಸರಿಲ್ಲದ ವ್ಯಕ್ತಿಗಳಿಂದ ಬೆಳೆದು ಬಂದ ಮಾಧ್ಯಮ ಎಂಬ ಕಾರಣಕ್ಕೆ ಜಾನಪದವು ನಿರ್ಲಕ್ಷ್ಯಕ್ಕೊಳಗಾಗಿದೆ ಎಂದರು.

ಜನಪದ ತಜ್ಞ ಪ್ರೊ. ಕೆ.ಎಸ್‌. ಕೌಜಲಗಿ ಮಾತನಾಡಿ, ನಮ್ಮ ಬದುಕೇ ಜನಪದ. ಇದು ಹೆಸರಿಲ್ಲದ, ಹೆಸರಿಡದ ಜನರಿಂದ ಬೆಳೆದಿದ್ದರೂ ಅನೇಕರು ಜನಪದ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿ ಪದವಿ ಗಳಿಸುತ್ತಿದ್ದಾರೆ. ಜನಪದದ ಮೂಲಕ ಸಂಹವನ ಮಾಡಿದ ವಿಷಯಗಳನ್ನು ಜನಸಾಮಾನ್ಯರಲ್ಲಿ ಪ್ರಶ್ನಾತೀತವಾಗಿ ಒಪ್ಪಲ್ಟಡುತ್ತವೆ ಎಂದರು.

ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಾಗಾರದ ಮುಖ್ಯ ಪರಿವೀಕ್ಷ ಣಾಧಿಕಾರಿ ಡಾ. ಲಿಂಗರಾಜ ರಾಮಾಪುರೆ ಐದು ದಿನಗಳ ಚಟುವಟಿಕೆಗಳ ಬಗ್ಗೆ ವಿವರಿಸಿದರು. ವಿಜ್ಞಾನ ಕೇಂದ್ರದ ಅಧಿಕಾರಿ ರಾಜಶೇಖರ ಪಾಟೀಲ, ಭಾರತೀಯ ಕುಟುಂಬ ಯೋಜನಾ ಸಂಸ್ಥೆ ಅಧ್ಯಕ್ಷ ಪ್ರೊ. ಜಿ. ಕೆ. ಕಡಬಡಿ, ಬೆಳಗಾವಿ ಜನಪದ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮೋಹನ ಗುಂಡ್ಲೂರು, ನಿವೃತ್ತ ಉಪನ್ಯಾಸಕ ಎಂ.ಬಿ. ಉಳ್ಳಾಗಡ್ಡಿ, ವಿಕಸನ ಸಂಸ್ಥೆ ಅಧ್ಯಕ್ಷ ಸಂಜಯ ಮಗದುಮ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ