ಆ್ಯಪ್ನಗರ

ಪೂಜಾರಿ ಮನೆ ಮುಂದೆ ಬೆಂಬಲಿಗರ ಧರಣಿ

ಗೋಕಾಕ: ಉಪಚುನಾವಣೆಯಲ್ಲಿ ಗೋಕಾಕ ಕ್ಷೇತ್ರದಿಂದ ಪಕ್ಷೇತರರಾಗಿ ಅಥವಾ ...

Vijaya Karnataka 18 Nov 2019, 5:00 am
ಗೋಕಾಕ: ಉಪಚುನಾವಣೆಯಲ್ಲಿಗೋಕಾಕ ಕ್ಷೇತ್ರದಿಂದ ಪಕ್ಷೇತರರಾಗಿ ಅಥವಾ ಯಾವುದಾದರೂ ಪಕ್ಷದಿಂದ ಸ್ವರ್ಧಿಸಿ. ಯಾವುದೇ ಕಾರಣಕ್ಕೂ ಚುನಾವಣೆ ಕಣದಿಂದ ಹಿಂದೆ ಸರಿಯಬೇಡಿ ಎಂದು ಆಗ್ರಹಿಸಿ ಬೆಂಬಲಿಗರು ಅಶೋಕ ಪೂಜಾರಿ ಮನೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
Vijaya Karnataka Web 17GOK2_53
ಉಪಚುನಾವಣೆಯಿಂದ ಹಿಂದೆ ಸರಿಯದಂತೆ ಆಗ್ರಹಿಸಿ ಅಶೋಕ ಪೂಜಾರಿ ಮನೆ ಎದುರು ಬೆಂಬಲಿಗರು ಧರಣಿ ನಡೆಸಿದರು.


ಭಾನುವಾರ ಮಧ್ಯಾಹ್ನ ನಗರದ ಅಂಬಿಗೇರ ಗಲ್ಲಿಯಲ್ಲಿರುವ ಅಶೋಕ ಪೂಜಾರಿ ಮನೆ ಮುಂದೆ ಸೇರಿದ ಬೆಂಬಲಿಗರು, ಪೂಜಾರಿ ಪರ ಜಯಘೋಷ ಕೂಗಿದರು. ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಬಾರದು. ಚುನಾವಣೆಗೆ ಸ್ಪರ್ಧೆ ಮಾಡುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲಎಂದು ಪಟ್ಟು ಹಿಡಿದರು.

ಸಾಮಾಜಿಕ ಹೋರಾಟಗಾರ ದಸ್ತಗೀರ ಪೈಲ್ವಾನ್‌, ನ್ಯಾಯವಾದಿ ಎಂ.ಎ. ಪೀರಜಾದೆ, ಕಲ್ಲಯ್ಯ ಮಠಪತಿ, ಈರಣ್ಣ ಹಿರೇಮಠ, ಬಿಲಾಲ ಕಲ್ಲೋಳಿ, ಚಂದ್ರಶೇಖರ ಬಬಲಿ, ಗುರು ಬೆನವಾಡ, ಅನಿಲ ಸಂಕಾವಿ, ನಾಗು ದೇಸಾಯಿ, ಮಂಜುನಾಥ ಪಾಟೀಲ, ರವಿ ಮಡಿವಾಳ ಮತ್ತಿತರರು ಇದ್ದರು.

2ನೇ ದಿನವೂ ಮನವೊಲಿಸಲು ಕಸರತ್ತು
ಗೋಕಾಕ: ಬಿಜೆಪಿ ಟಿಕೆಟ್‌ ಸಿಗದ್ದಕ್ಕೆ ಅಸಮಾಧಾನಗೊಂಡಿರುವ ಅಶೋಕ ಪೂಜಾರಿ ಅವರನ್ನು ಪಕ್ಷದಲ್ಲಿಉಳಿಸಿಕೊಳ್ಳಲು ಭಾನುವಾರ ಸಂಜೆ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮನವೊಲಿಕೆ ಪ್ರಕ್ರಿಯೆ ಮುಂದುವರಿಸಿದರು.

ಶನಿವಾರ ಕೇಂದ್ರ ಸಚಿವ ಸುರೇಶ ಅಂಗಡಿ, ರಮೇಶ್‌ ಜಾರಕಿಹೊಳಿ ಅವರು ಅಶೋಕ ಪೂಜಾರಿ ಮನೆಗೆ ಭೇಟಿ ನೀಡಿ ಮನವೊಲಿಸಲು ಯತ್ನಿಸಿದ್ದರು. ಭಾನುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಸಂದೇಶ ಹೊತ್ತು ಬಂದ ನಡಹಳ್ಳಿ ಮತ್ತೆ ಸಂಧಾನ ಪ್ರಕ್ರಿಯೆ ಮುಂದುವರಿಸಿದರು.

ಬೆಂಬಲಿಗರು, ಹಿತೈಷಿಗಳು, ರಾಜಕೀಯ ಮುಖಂಡರ ಸಲಹೆ ಪಡೆದು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಅಶೋಕ ಪೂಜಾರಿ ಹೇಳಿದರು.

ಜೆಡಿಎಸ್‌ದಿಂದ ಸ್ಪರ್ಧೆ?:
ಗೋಕಾಕ ಉಪಚುನಾವಣೆಯ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳಾದ ಜಾರಕಿಹೊಳಿ ಸಹೋದರರಿಗೆ ಪೈಪೋಟಿ ನೀಡಲು ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಂತ್ರ ರೂಪಿಸುತ್ತಿದೆ. ಬಿಜೆಪಿ ಮುಖಂಡ ಅಶೋಕ ಪೂಜಾರಿ ಅವರನ್ನು ಕಾಂಗ್ರೆಸ್‌ ಕೈಬಿಟ್ಟ ನಂತರ ಜೆಡಿಎಸ್‌ ತನ್ನತ್ತ ಸೆಳೆಯಲು ಮುಂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ