ಆ್ಯಪ್ನಗರ

'ನೀವ್ ಕ್ರಮ ಜರುಗಿಸದಿದ್ರ, ನಾ ಬಡ್ಯಾಂವ್‌': ಗೋಕಾಕ ಪೊಲೀಸರಿಗೆ ಸತೀಶ್‌ ಜಾರಕಿಹೊಳಿ ಆವಾಜ್‌

ಗೋಕಾಕ ನಗರದಲ್ಲಿ ರಮೇಶ್‌ ಜಾರಕಿಹೊಳಿ ಅಳಿಯ ಅಂಬಿರಾವ್‌ ಪಾಟೀಲ ಮತ್ತು ಅವರ ಬೆಂಬಲಿಗ ರಾಜು ತಳವಾರ ದಬ್ಬಾಳಿಕೆ ಹೆಚ್ಚಾಗುತ್ತಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.

Vijaya Karnataka 29 Sep 2019, 6:56 am
ಬೆಳಗಾವಿ: 'ನೀವು ತಾಕೀತ್‌ ಮಾಡ್ರಿ. ನೀವೇನೂ ಮಾಡ್ದಿದ್ರ ನಾನ ಮುಂದ್‌ ನಿಂತ್‌ ಬಡ್ಯಾಂವ್‌. ನಿಮ್ಮ ಎಂಎಲ್‌ಎ ಬಂದ್ರೂ ಬಡ್ಯಾಂವ್‌, ಅಂಬಿ ಬಂದ್ರೂ ಬಡ್ಯಾಂವ್‌. ಆ ತಾಕತ್‌ ನಮಗೂ ಐತಿ' ಎಂದು ಯಮಕನಮರಡಿ ಶಾಸಕ ಸತೀಶ್‌ ಜಾರಕಿಹೊಳಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web jarakiholi


ಸಹೋದರ ಲಖನ್‌ ಜಾರಕಿಹೊಳಿ ಜತೆಗೆ ಶನಿವಾರ ಗೋಕಾಕ ನಗರದ ಡಿಎಸ್ಪಿ ಕಚೇರಿಗೆ ಭೇಟಿ ನೀಡಿ ಪೊಲೀಸ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, 'ನಗರದಲ್ಲಿ ರಮೇಶ್‌ ಜಾರಕಿಹೊಳಿ ಅಳಿಯ ಅಂಬಿರಾವ್‌ ಪಾಟೀಲ ಮತ್ತು ಅವರ ಬೆಂಬಲಿಗ ರಾಜು ತಳವಾರ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಅಂಕಲಿ ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ರಾಜು ತಳವಾರ ಹಲ್ಲೆನಡೆಸಿದ್ದಾನೆ. ಅವನಿಗೆ ತಾಕೀತು ಮಾಡಿ ನಿಯಂತ್ರಿಸದಿದ್ದರೆ ನಾನೇ ರಾಜು ತಳವಾರನನ್ನು ಹೊಡೆಯುತ್ತೇನೆ' ಎಂದು ಕಾಂಗ್ರೆಸ್‌ ಕಾರ್ಯಕರ್ತರ ಸಮ್ಮುಖದಲ್ಲೇ ಪೊಲೀಸ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

'ಕಾರ್ಯಕರ್ತರು ಮಾಡಿದ ತಪ್ಪಾದರೂ ಏನು? ನಮ್ಮ ಜತೆಗೆ ಅಡ್ಡಾಡೋದೇ ತಪ್ಪಾ? ನಿಮ್ಮ ಲೀಡರ್‌, ನಿಮ್ಮ ಎಸ್ಪಿ ಇದ್ದಂಗಿರುವ ಅಂಬಿರಾವ್‌ನನ್ನು ಕನ್ವಿನ್ಸ್‌ ಮಾಡಿ. ನಮ್ಮ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು. ಇಲ್ಲದಿದ್ದರೆ ಬಿಡೋದಿಲ್ಲ. ನಾವು ಕಂಪ್ಲೇಂಟ್‌ ಕೊಡೋದಿಲ್ಲ. ಕಂಪ್ಲೇಂಟ್‌ನಿಂದ ಏನೂ ಆಗೋದಿಲ್ಲಎಂದು ಗೊತ್ತಿದೆ. ನಿಮ್ಮ ಸವೀರ್‍ಸ್‌ಗೂ ಮುಂಚೆ ಎಂಟ್ರಿ ಆಗೇನಿ. ರಾಜು ಮತ್ತು ಅಂಬ್ಯಾನ ಕಂಟ್ರೋಲ್‌ ಮಾಡೋದು ನಿಮಗೆ ಬಿಟ್ಟಿದ್ದು. ನಾವಂತೂ ಎಲ್ಲದಕ್ಕೂ ತಯಾರಿದ್ದೇವೆ. ಪೊಲೀಸ್‌ ಸ್ಟೇಶನ್‌ ಮುಂದೂ ಕೂಡ್ರುತ್ತೇವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಅನ್ಯಾಯ ಹೆಚ್ಚಾಗುತ್ತಿದೆ. ನೀವೆಲ್ಲನೋಡಿಕೊಳ್ಳಬೇಕು' ಎಂದು ಲಖನ್‌ ಜಾರಕಿಹೊಳಿ ಸಹ ಧ್ವನಿಗೂಡಿಸಿದರು. ಡಿವೈಎಸ್ಪಿ ಡಿ.ಟಿ. ಪ್ರಭು ಮತ್ತು ಅಂಕಲಗಿ ಪಿಎಸ್‌ಐ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ