ಆ್ಯಪ್ನಗರ

ಜುಗೂಳ-ಖಿದ್ರಾಪುರ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಜುಗೂಳ-ಖಿದ್ರಾಪುರ ಮಧ್ಯೆ ಕೃಷ್ಣಾ ನದಿಗೆ ಸೇತುವೆ ನಿರ್ಮಿಸಲು

Vijaya Karnataka 17 Aug 2018, 5:00 am
ಕಾಗವಾಡ: ಜುಗೂಳ-ಖಿದ್ರಾಪುರ ಮಧ್ಯೆ ಕೃಷ್ಣಾ ನದಿಗೆ ಸೇತುವೆ ನಿರ್ಮಿಸಲು ಅನೇಕ ಶಾಸಕರ, ಸಂಸದರೆದುರು ಜನ ಬೇಡಿಕೆ ಸಲ್ಲಿಸಿದ್ದರೂ ಈಡೇರಿರಲಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬೇಡಿಕೆಗೆ ಸ್ಪಂದಿಸಿದ್ದರಿಂದ 20.85 ಕೋಟಿ ವೆಚ್ಚದ ಕಾಮಗಾರಿಗೆ ಮಂಜೂರಾತಿ ದೊರೆತಿದ್ದು ಶೀಘ್ರವೇ ಸೇತುವೆ ನಿರ್ಮಾಣಗೊಳುತ್ತಿದೆ ಎಂದು ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.
Vijaya Karnataka Web BEL-16 KAGWAD 1 NEWS PHOTO


ತಾಲೂಕಿನ ಜುಗೂಳದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಥಣಿ-ಶಿರೋಳ ತಾಲೂಕಿನ ಅನೇಕ ಗ್ರಾಮದ ಜನರಿಗೆ ಕೃಷ್ಣಾ ನದಿ ದಾಟಲು ಕೇವಲ ದೋಣಿ ವ್ಯವಸ್ಥೆ ಇದೆ. ಇದರಿಂದ ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿ ಅನುದಾನ ಮಂಜೂರು ಮಾಡಿ ಬಿಎಸ್‌ಆರ್‌ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಇಲ್ಲಿಯ ರಾಜಕೀಯ ಮುಖಂಡರು, ಅಭಿಯಂತರರು ಪ್ರಾಮಾಣಿಕವಾಗಿ ಗುತ್ತಿಗೆದಾರದಿಂದ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಅವರು ಹೇಳಿದರು.

ದತ್ತ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಗಣಪತರಾವ್‌ ಪಾಟೀಲ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಎರಡೂ ರಾಜ್ಯಗಳ ಗಡಿಯಲ್ಲಿ ಸಂಸದ ಪ್ರಕಾಶ ಹುಕ್ಕೇರಿಯವರು ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಂದ ಎರಡು ರಾಜ್ಯಗಳ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿದೆ ಎಂದರು.

ಕೆಆರ್‌ಡಿಸಿಎಲ್‌ ಯೋಜನೆ ವಿಭಾಗ ಹುಬ್ಬಳ್ಳಿ ಸಹಾಯಕ ಅಭಿಯಂತ ಸುನೀಲ್‌ ಬಳೋಲ್‌ ಸೇತುವೆ ನಿರ್ಮಾಣದ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ, ದತ್ತ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಸಿದ್ಧಗೌಡಾ ಪಾಟೀಲ, ಕಾಗವಾಡ ಬ್ಲಾಕ್‌ ಆಧ್ಯಕ್ಷ ವಿಜಯ ಅಕಿವಾಟೆ, ಜುಗೂಳ ಗ್ರಾಪಂ ಅಧ್ಯಕ್ಷ ಸಂಜಯ ಮಿಣಚೆ, ಕಾಡಾ ಮಾಜಿ ಅಧ್ಯಕ್ಷ ಪ್ರಭಾಕರ ಕೋರೆ, ಮಾಜಿ ಗ್ರಾಪಂ ಅಧ್ಯಕ್ಷ ಬಾಬಾಸಾಹೇಬ ಪಾಟೀಲ, ಡಾ. ರಾಜಗೌಡಾ ಪಾಟೀಲ, ಖಿದ್ರಾಪುರ ಗ್ರಾಪಂ ಅಧ್ಯಕ್ಷ ಹೈದರ್‌ ಮೋಕಾಶಿ, ಸಂಜಯ ಪಾಟೀಲ, ಭಾವುಸಾಹೇಬ ರಾಯನಾಡೆ, ಅಪ್ಪಾಸಾಹೇಬ ಸುಂಖೆ, ದ್ವಾರಪಾಲ್‌ ಲಡಗೆ, ಬಿಎಸ್‌ಆರ್‌ ಕಂಪನಿಯ ಗುತ್ತಿಗೆದಾರರು ಸೇರಿದಂತೆ ಜುಗೂಳ, ಶಿರಗುಪ್ಪಿ, ಖಿದ್ರಾಪುರ ಗ್ರಾಮದ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ