ಆ್ಯಪ್ನಗರ

ಮನೆ ಗೋಡೆ ಬಿದ್ದು ನಾಲ್ವರಿಗೆ ಗಂಭೀರ ಗಾಯ

ಬೈಲಹೊಂಗಲ: ಪಟ್ಟಣದ ಇಂಚಲ ಗಲ್ಲಿಯಲ್ಲಿಮಳೆಯಿಂದ ಬಿರುಕು ಬಿಟ್ಟಿದ್ದ ಮನೆ ಗೋಡೆ ಕುಸಿದು ...

Vijaya Karnataka 24 Sep 2019, 5:00 am
ಬೈಲಹೊಂಗಲ: ಪಟ್ಟಣದ ಇಂಚಲ ಗಲ್ಲಿಯಲ್ಲಿಮಳೆಯಿಂದ ಬಿರುಕು ಬಿಟ್ಟಿದ್ದ ಮನೆ ಗೋಡೆ ಕುಸಿದು ಬಿದ್ದು ನಾಲ್ಕು ಜನರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ರಾಜು ಯಲಿಗಾರ, ಭಾರತಿ ಯಲಿಗಾರ ಗಾಯಗೊಂಡವರು. ಸುನಂದಾ ಯಲಿಗಾರ ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.
Vijaya Karnataka Web four injured as wall collapses in house
ಮನೆ ಗೋಡೆ ಬಿದ್ದು ನಾಲ್ವರಿಗೆ ಗಂಭೀರ ಗಾಯ


ಇವರು ಮನೆಯಲ್ಲಿದ್ದಾಗ ಮನೆಗೋಡೆ ಏಕಾಏಕಿ ಕುಸಿದು ಮೈಮೇಲೆಯೇ ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ಮೂರು ಜನರು ಮಣ್ಣಿನಲ್ಲಿಸಿಲುಕಿಕೊಂಡಿದ್ದರು. ತಕ್ಷಣವೇ ಅಕ್ಕ-ಪಕ್ಕದ ಮನೆಯವರು ಸ್ಥಳಕ್ಕೆ ಬಂದು ಮಣ್ಣಿನಲ್ಲಿಸಿಲುಕಿಕೊಂಡವರನ್ನು ಮೇಲೆ ಎತ್ತಿದ್ದಾರೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ವಿಷಯ ತಿಳಿದು ತಹಸೀಲ್ದಾರ ಡಾ.ಡಿ.ಎಚ್‌.ಹೂಗಾರ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಮನೆ ಸಂಪೂರ್ಣ ಹಾನಿಯಾದ ಬಗ್ಗೆ ಎಂಜಿನಿಯರ್‌, ಗ್ರಾಮಲೆಕ್ಕಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಪರಿಹಾರ ಧನ ನೀಡುವುದಾಗಿ 'ವಿಜಯ ಕರ್ನಾಟಕ'ಕ್ಕೆ ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ