ಆ್ಯಪ್ನಗರ

ಕಾರು ಅಪಘಾತದಲ್ಲಿನಾಲ್ವರಿಗೆ ಗಾಯ

ಹಿರೇಬಾಗೇವಾಡಿ: ಬೆಳಗಾವಿ ಕಡೆಯಿಂದ ಹುಬ್ಬಳ್ಳಿಯತ್ತ ...

Vijaya Karnataka 9 Dec 2019, 5:00 am
ಹಿರೇಬಾಗೇವಾಡಿ: ಬೆಳಗಾವಿ ಕಡೆಯಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಕಾರು ಭಾನುವಾರ ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿಯ ಕಮಕಾರಹಟ್ಟಿ ಬಳಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ತೀವ್ರ ಗಾಯಗೊಂಡಿದ್ದಾರೆ.
Vijaya Karnataka Web 8HBD2093237
ಬೆಳಗಾವಿ ತಾಲೂಕು ಕಮಕಾರಹಟ್ಟಿಯ ಬಳಿ ಭಾನುವಾರ ಬೆಳಗಿನ ಜಾವ ಅಪಘಾತಕ್ಕೀಡಾಗಿ ನುಜ್ಜುಗುಜ್ಜಾದ ಕಾರು.


ಸಾಂಗ್ಲಿಜಿಲ್ಲೆಯ ಬಾಗನಿ ಗ್ರಾಮದವರಾದ ವಿಷ್ಣು ಸಾವಂತಾ ಮೇತ್ರೆ (58), ರುಕ್ಮಿಣಿ ವಿಷ್ಣು ಮೇತ್ರೆ (47), ಸುಜಾತಾ ಅಣ್ಣಾಸು ಪಾಟೀಲ (48) ಹಾಗೂ ಚಾಲಕ ಭಗವಾನ ಮೇತ್ರೆ ಗಾಯಗೊಂಡವರು.

ವೇಗವಾಗಿ ಚಲಿಸುತ್ತಿದ್ದ ಕಾರಿನ ಮುಂದಿನ ಟೈರ್‌ ಒಡೆದು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಅಪಘಾತದ ತೀವ್ರತೆಗೆ ಮುಂದಿನ ಚಕ್ರ ಕಿತ್ತು ಸೇತುವೆಗೆ ಸಿಕ್ಕಿಹಾಕಿಕೊಂಡಿತ್ತು.

ಸ್ಥಳಕ್ಕೆ ಧಾವಿಸಿದ ಹಿರೇಬಾಗೇವಾಡಿ ಪೊಲೀಸರು ಗಾಯಾಳುಗಳನ್ನು ಜಿಲ್ಲಾಆಸ್ಪತ್ರೆಗೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆæ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ