ಆ್ಯಪ್ನಗರ

ಸಚಿನ್‌ ಕೊಲೆ ಪ್ರಕರಣದ ನಾಲ್ವರು ಆರೋಪಿತರ ಬಂಧನ

ನಿಪ್ಪಾಣಿ: ತಾಲೂಕಿನ ಹಂಚಿನಾಳ ಕೆಎಸ್‌...

Vijaya Karnataka 7 Sep 2020, 5:00 am
ನಿಪ್ಪಾಣಿ: ತಾಲೂಕಿನ ಹಂಚಿನಾಳ ಕೆ.ಎಸ್‌. ಗ್ರಾಮದಲ್ಲಿಕಳೆದ ಎರಡು ದಿನಗಳ ಹಿಂದಷ್ಟೇ ಪತಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಪತ್ನಿ ಹಾಗೂ ಸಹ ಆರೋಪಿಗಳನ್ನು ಇಲ್ಲಿನ ಗ್ರಾಮೀಣ ಪೋಲಿಸರು ಭಾನುವಾರ ಮಹಾರಾಷ್ಟ್ರ ಗಡಿಯಲ್ಲಿಬಂಧಿಸಿದ್ದಾರೆ.
Vijaya Karnataka Web 6 NPN 1 PP _53
ಬಂಧಿತ ಆರೋಪಿಗಳು

ಕೊಲೆಯಾದ ಸಚಿನ್‌ ಸದಾಶಿವ ಭೋಪಳೆ ಪತ್ನಿ ಅನಿತಾ (35), ಸಹ ಆರೋಪಿತರಾದ ಕೃಷ್ಣಾತ್‌(ಪಿಂಟು) ರಾಜಾರಾಮ ಘಾಟಗೆ(26) ಹಾಗೂ ಪತ್ನಿಯ ಸಹೋದರಿ ಕಾಗಲ್‌ ತಾಲೂಕಿನ ಸಿದ್ಧನೇರ್ಲಿ ಗ್ರಾಮದ ವನಿತಾ ಕೃಷ್ಣಾತ್‌ ಚವಾಣ(29) ಮತ್ತು ಹುನ್ನರಗಿ ಗ್ರಾಮದ ಗಣೇಶ ಅಣ್ಣಪ್ಪಾ ರೇಡೇಕರ(21) ಬಂಧಿತರು. ಇವರಿಂದ ಕೊಲೆಗೆ ಉಪಯೋಗಿಸಿದ್ದ ಬಡಿಗೆ, ಹಗ್ಗ ಇತ್ಯಾದಿ ವಶಪಡಿಸಿಕೊಳ್ಳಲಾಗಿದ್ದು ನಾಲ್ವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪಿಎಸ್‌ಐ ಬಿ.ಎಸ್‌.ತಳವಾರ ನೇತೃತ್ವದಲ್ಲಿಪೋಲಿಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ