ಆ್ಯಪ್ನಗರ

ಬೈಕ್‌ ಅಪಘಾತ: ನಾಲ್ವರು ಗಂಭೀರ

ಖಾನಾಪುರ ರಸ್ತೆಯ ಮಚ್ಛೆ ಬಳಿ ಸೋಮವಾರ ಸಂಜೆ ಎರಡು ಬೈಕ್‌ಗಳ ಮಧ್ಯೆ ಡಿಕ್ಕಿ ಸಂಭವಿಸಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ...

Vijaya Karnataka 15 Jan 2019, 5:00 am
ಬೆಳಗಾವಿ: ಖಾನಾಪುರ ರಸ್ತೆಯ ಮಚ್ಛೆ ಬಳಿ ಸೋಮವಾರ ಸಂಜೆ ಎರಡು ಬೈಕ್‌ಗಳ ಮಧ್ಯೆ ಡಿಕ್ಕಿ ಸಂಭವಿಸಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
Vijaya Karnataka Web BLG-1401-2-52-14PRAMOD6


ನಾವಗೆಯ ಸಾತೇರಿ ನಿಂಗಪ್ಪ ಬೆಳಗಾಂವ್ಕರ್‌(26), ರಾಹುಲ್‌ ದೇವಪ್ಪ ಗುರವ (22), ಮಂಡೋಳ್ಳಿಯ ಶಿವಾಜಿ ಚೌಕ್‌ನ ಮಂಗೇಶ ದಳವಿ (25) ಗಾಯಗೊಂಡಿದ್ದಾರೆ. ಮತ್ತೋರ್ವನ ಹೆಸರು ಗೊತ್ತಾಗಿಲ್ಲ.

ಗಾಯಾಳುಗಳ ಪೈಕಿ ಇಬ್ಬರನ್ನು ಹುಬ್ಬಳ್ಳಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನಿಬ್ಬರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗೇಶ ದಳವಿ ಇಟ್ಟಂಗಿ ತರಲು ದೇಸೂರಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ