ಆ್ಯಪ್ನಗರ

ಅಕ್ರಮ ಬಂಧನ, ಹಲ್ಲೆ: ನಾಲ್ವರಿಗೆ ಶಿಕ್ಷೆ

ಘಟಪ್ರಭಾ: ಜಮೀನು ವಿವಾದದ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಆಕೆಯ ಪತಿಯನ್ನು ಹಗ್ಗದಿಂದ ಕಟ್ಟಿಹಾಕಿ ಬಾರುಕೋಲು, ಚಪ್ಪಲಿಗಳಿಂದ ಹಲ್ಲೆ ನಡೆಸಿದ ನಾಲ್ವರು ...

Vijaya Karnataka 20 Jan 2019, 5:00 am
ಘಟಪ್ರಭಾ : ಜಮೀನು ವಿವಾದದ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಆಕೆಯ ಪತಿಯನ್ನು ಹಗ್ಗದಿಂದ ಕಟ್ಟಿಹಾಕಿ ಬಾರುಕೋಲು, ಚಪ್ಪಲಿಗಳಿಂದ ಹಲ್ಲೆ ನಡೆಸಿದ ನಾಲ್ವರು ಆಪಾದಿತರಿಗೆ ಇಲ್ಲಿಯ 1ನೇ ಹೆಚ್ಚುವರಿ ಜೆ.ಎಂ.ಎಫ್‌.ಸಿ. ನ್ಯಾಯಾಲಯ ಒಂದು ವರ್ಷ ಜೈಲುವಾಸದ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ.
Vijaya Karnataka Web four sentenced for illegal detention and assault
ಅಕ್ರಮ ಬಂಧನ, ಹಲ್ಲೆ: ನಾಲ್ವರಿಗೆ ಶಿಕ್ಷೆ


ಕೌಜಲಗಿ ಗ್ರಾಮದ ಬೀರಪ್ಪಾ ನಿಂಗಪ್ಪಾ ಬೆಳ್ಳಿವಾರಿ, ವಿಠಲ ಮಹಾದೇವ ಬೆಳ್ಳಿವಾರಿ, ಭಾಗವ್ವಾ ಮಹಾದೇವ ಬೆಳ್ಳಿವಾರಿ ಮತ್ತು ಮಹಾದೇವಿ ಬೀರಪ್ಪಾ ಬೆಳ್ಳಿವಾರಿ ಎಂಬುವವರೇ ಶಿಕ್ಷೆಗೊಳಗಾದವರು.

2014ರ ಸೆ.24ರಂದು ಕೌಜಲಗಿ ಹೊರವಲಯದ ಕೃಷಿ ಭೂಮಿಯೊಂದರಲ್ಲಿ ಉಳುಮೆಯಲ್ಲಿ ನಿರತರಾಗಿದ್ದ ಭೀಮಪ್ಪಾ ಬಸಪ್ಪಾ ಬೆಳ್ಳಿವಾರಿ ಹಾಗೂ ಆತನ ಸೊಸೆ ಕಸ್ತೂರಿ ಬಸಪ್ಪಾ ಬೆಳ್ಳಿವಾರಿ ಇವರೊಂದಿಗೆ ಆಪಾದಿತರು ಉಳುಮೆ ವಿಷಯವಾಗಿ ತಂಟೆ-ತಕರಾರು ತೆಗೆದಿದ್ದರು. ನಂತರ ಅವರಿಬ್ಬರನ್ನೂ ಹಗ್ಗದಿಂದ ಕಟ್ಟಿಹಾಕಿ ಚಪ್ಪಲಿ ಹಾಗೂ ಬಾರುಕೋಲಿನಿಂದ ಹಲ್ಲೆ ನಡೆಸಿದ್ದರು. ಈ ಸಂಬಂಧ ಕಸ್ತೂರಿ ಬೆಳ್ಳಿವಾರಿ ಕುಲಗೋಡ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಕುಲಗೋಡ ಠಾಣೆಯ ಆಗಿನ ಸಹಾಯಕ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಬಿ.ಎಸ್‌.ಸಿದ್ನಾಳ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ವೀರೇಶಕುಮಾರ ಸಿ.ಕೆ. ಅವರು ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಎಂ.ಪಿ.ಗಾಂವಕರ ವಾದಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ