ಆ್ಯಪ್ನಗರ

ನರಿ ಕಚ್ಚಿ ಆರು ಜನರಿಗೆ ಗಾಯ

ಸಮೀಪದ ಕವಲಗುಡ್ಡ ಗ್ರಾಮದ ಸುತ್ತಮುತ್ತಲಿನ ತೋಟದ ವಸತಿಯ ಆರು ಜನರನ್ನು ನರಿಯೊಂದು ...

Vijaya Karnataka 15 Oct 2019, 5:00 am
ಮೋಳೆ: ಸಮೀಪದ ಕವಲಗುಡ್ಡ ಗ್ರಾಮದ ಸುತ್ತಮುತ್ತಲಿನ ತೋಟದ ವಸತಿಯ ಆರು ಜನರನ್ನು ನರಿಯೊಂದು ಕಚ್ಚಿ ಗಾಯಗೊಳಿಸಿದೆ.
Vijaya Karnataka Web 14 MOLE-1 PHOTO_53


ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕ ರಣವ ತಾನಾಜಿ ಖೋತ ಎಂಬ ಬಾಲಕನ ಎರಡೂ ಕಾಲುಗಳಿಗೆ ನರಿ ಕಚ್ಚಿದ್ದು, ತಡೆಯಲು ಬಂದ ಅಜ್ಜಿ ರಂಜನಾ ಪರಶುರಾಮ ಮೋಟೆ ಎನ್ನುವವರನ್ನೂ ಕಚ್ಚಿ ಗಾಯಗೊಳಿಸಿದೆ. ಅಲ್ಲದೆ, ಇದೇ ನರಿ ಸುತ್ತಮುತ್ತಲಿನ ತೋಟದಲ್ಲಿಕೆಲಸ ಮಾಡುತ್ತಿದ್ದ ಮಲ್ಲೇಶ ವಗ್ಗ, ಶಂಕರ ಬೇಸರಾಮ, ಸುರೇಖಾ ಬೇಸರಾಮ, ಅಶ್ವಿನಿ ತೆಗ್ಗಿನವರ ಎಂಬುವರನ್ನು ಸಹ ಕಚ್ಚಿ ಗಾಯಗೊಳಿಸಿದೆ. ಎಲ್ಲರೂ ಅಥಣಿ ಹಾಗೂ ಮಿರಜ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಈ ಭಾಗದಲ್ಲಿನರಿಗಳ ಹಾವಳಿ ಹೆಚ್ಚುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ