ಆ್ಯಪ್ನಗರ

ಶಿಕ್ಷಕರನ್ನು ಬಿಎಲ್‌ಒ ಕೆಲಸದಿಂದ ಮುಕ್ತಗೊಳಿಸಿ

ಮೂಡಲಗಿ: ಶಿಕ್ಷಣ ಇಲಾಖೆ ಹಾಗೂ ಇಲಾಖೇತರ ಕಾರ್ಯಗಳು ಶಿಕ್ಷಕರಿಗೆ ಹೊರೆಯಾಗುತ್ತಿವೆ...

Vijaya Karnataka 19 Dec 2018, 5:00 am
ಮೂಡಲಗಿ : ಶಿಕ್ಷಣ ಇಲಾಖೆ ಹಾಗೂ ಇಲಾಖೇತರ ಕಾರ್ಯಗಳು ಶಿಕ್ಷಕರಿಗೆ ಹೊರೆಯಾಗುತ್ತಿವೆ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗುತ್ತಿದ್ದು, ಸಕಾಲದಲ್ಲಿ ಮಕ್ಕಳಿಗೆ ಬೋಧನಾ ಕಾರ್ಯಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇವುಗಳು ಶಿಕ್ಷಕರಿಗೆ ವೈಯಕ್ತಿಕ ಕಿರಿಕಿರಿಯುಂಟು ಮಾಡುತ್ತಿವೆ ಎಂದು ಮೂಡಲಗಿ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಬಿ.ಆರ್‌. ತರಕಾರ ಹೇಳಿದರು.
Vijaya Karnataka Web BEL-18MDL1


ಅವರು ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ಬಿಎಲ್‌ಒ ಕಾರ್ಯದಿಂದ ಶಿಕ್ಷ ಕರನ್ನು ಮುಕ್ತಗೊಳಿಸಬೇಕೆಂದು ಆಗ್ರಹಿಸಿ ತಹಸೀಲದ್ದಾರ್‌ ಮುರಳಿಧರ ತಳ್ಳಿಕೇರಿ ಅವರಿಗೆ ಮನವಿ ಪತ್ರ ನೀಡಿ ಮಾತನಾಡಿದರು.

ಶಿಕ್ಷಕರನ್ನು ಬಿಎಲ್‌ಒ ಕಾರ್ಯಗಳಿಗೆ ಬಳಸಕೂಡದೆಂದು ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದರೂ ಶಿಕ್ಷಕರನ್ನು ಈ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಠ ಪ್ರವಚನ ನಡೆಯುವುದು ಅತ್ಯವಶ್ಯ. ಶಿಕ್ಷಕರನ್ನು ಬೋಧನೆಗೆ ಬಿಟ್ಟಾಗ ಮಾತ್ರ ಸರಕಾರಿ ಶಾಲೆಗಳು ಉಳಿಯುತ್ತವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಶಿಕ್ಷಕ ಸಮೂಹ ರಾಜ್ಯಾದ್ಯಂತ ಪ್ರತಿಭಟನೆ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಲೋಕನ್ನವರ ಮಾತನಾಡಿ, ಗುಣಾತ್ಮಕ ಕಲಿಕೆ ಸಾಧ್ಯವಾಗಬೇಕಾದರೆ ಶಿಕ್ಷ ಕ ವರ್ಗಕೋಣೆಯಲ್ಲಿ ಮಗುವಿಗೆ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕು. ಶಿಕ್ಷಕರಿಗೆ ಅನಗತ್ಯ ಕಾರ್ಯಗಳನ್ನು ವಹಿಸುವ ಸರಕಾರಿ ಶಾಲೆಗಳು ಅವನತಿಯತ್ತ ಸಾಗುತ್ತವೆ. ಹೀಗಾಗಿ ಕೂಡಲೆ ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.

ಸಂಘಟನೆಯ ಆರ್‌.ಎಂ. ಮಹಾಲಿಂಗಪುರ, ಎ.ಪಿ. ಪರಸಣ್ಣವರ ಮಾತನಾಡಿ, ಇಗಾಗಲೇ ಇಲಾಖೆಯಲ್ಲಿಯ ಎಸ್‌ಟಿಎಸ್‌, ಬಿಸಿಯೂಟ, ಎಸ್‌ಡಿಎಂಸಿ, ಶಿಷ್ಯ ವೇತನ ಮತ್ತು ಏನೂ ಗೊತ್ತಿರದ ಅಂತರ್ಜಾಲದ ಮಾಹಿತಿ ಒದಗಿಸುವ ಕಾರ್ಯದಲ್ಲಿ ಶಿಕ್ಷ ಕ ಸಮೂಹ ಹೈರಾಣಾಗಿದೆ. ಈಗ ಬಿಎಲ್‌ಒ ಕಾರ್ಯವನ್ನೂ ವಹಿಸುವುದರಿಂದ ತರಗತಿಗಳನ್ನು ನಡೆಸುವುದೇ ದುಸ್ತರವಾಗಿದೆ. ನಲಿ ಕಲಿ ತರಗತಿ ಶಿಕ್ಷ ಕರು ಬಿಎಲ್‌ಒ ಕಾರ್ಯದಲ್ಲಿದ್ದು ಆ ತರಗತಿಗಳ ನಿರ್ವಹಣೆ ಮಾಡಲು ಆಗುತ್ತಿಲ್ಲ ಎಂದರು.

ತಹಸಿಲ್ದಾರ ಮುರಳಿಧರ ತಳ್ಳಿಕೇರಿ ಮನವಿ ಸ್ವೀಕರಿಸಿ ಮಾತನಾಡಿ, ನೀಡಿರುವ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ರವಾಣಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷ ಕ ಸಂಘದ ಪ್ರಧಾನ ಕಾರ್ಯದರ್ಶಿ ಎಲ್‌.ಎಂ. ಬಡಕಲ, ಡಾ. ಎಂ.ಜೆ. ಜಿಡ್ಡಿಮನಿ, ಎಸ್‌.ಎಲ್‌ ಪಾಟೀಲ, ಎಸ್‌.ಎಂ. ದಬಾಡಿ, ವೈ.ಡಿ. ಝಲ್ಲಿ, ಎಸ್‌.ಎಂ. ಮಂಗಿ, ಶಂಕರ ಗುಡಗುಡಿ, ಲಮಾಣಿ, ಎಸ್‌.ಆರ್‌. ಬೆಳಗಲಿ, ಕೆ.ಎಲ್‌. ಮೀಶಿ, ಎಸ್‌.ಎ. ಕುರಣಗಿ, ಎಸ್‌.ಎ. ದಡ್ಡಿಮನಿ, ಎಂ.ಬಿ. ನಾಯಕರ, ಎಸ್‌.ಎಸ್‌. ಪಾಟೀಲ, ಬಸಯ್ಯ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ