ಆ್ಯಪ್ನಗರ

ಪದೇ ಪದೆ ಬಿಎಸ್‌ಎನ್‌ಎಲ್‌ ಟಾವರ್‌ ಸ್ಥಗಿತ: ದುರಸ್ತಿಗೆ ಆಗ್ರಹ

ಮುನವಳ್ಳಿ: ಸಮೀಪದ ಯಕ್ಕುಂಡಿ ಗ್ರಾಮದಲ್ಲಿ ಸ್ಥಾಪಿಸಿರುವ ಬಿಎಸ್‌ಎನ್‌ಎಲ್‌ ಟಾವರ್‌ ಪದೇ ಪದೆ ಸ್ಥಗಿತಗೊಳ್ಳುತ್ತಿರುವುದರಿಂದ ಇಲ್ಲಿನ ಗ್ರಾಹಕರು ದುರಸ್ತಿ ...

Vijaya Karnataka 28 Jul 2019, 5:00 am
ಮುನವಳ್ಳಿ: ಸಮೀಪದ ಯಕ್ಕುಂಡಿ ಗ್ರಾಮದಲ್ಲಿ ಸ್ಥಾಪಿಸಿರುವ ಬಿಎಸ್‌ಎನ್‌ಎಲ್‌ ಟಾವರ್‌ ಪದೇ ಪದೆ ಸ್ಥಗಿತಗೊಳ್ಳುತ್ತಿರುವುದರಿಂದ ಇಲ್ಲಿನ ಗ್ರಾಹಕರು ದುರಸ್ತಿ ಮಾಡದ ಅಧಿಕಾರಿಗಳ ಬೇಜವಾಬ್ದಾರಿಗೆ ರೋಸಿ ಹೋಗಿದ್ದಾರೆ.
Vijaya Karnataka Web BEL-27 MNL 4


ಅಡತಡೆ ಇಲ್ಲದಂತೆ ಟಾವರ್‌ ಕಾರ್ಯ ನಿರ್ವಹಿಸಲು ಪ್ರಮುಖ ತಾಂತ್ರಿಕ ದೋಷಗಳನ್ನು ನಿವಾರಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಹೀಗಾಗಿ ತಾಂತ್ರಿಕ ದೋಷ ಹಿಂದಿನಿಂದಲೂ ಇದೆ ಎನ್ನಲಾಗಿದೆ. 10 ವರ್ಷ ಗತಿಸಿದರೂ ಇಲ್ಲಿನ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಿಲ್ಲ. ಟಾವರ್‌ ಬಳಿ ಹೋದರೆ ಅಲ್ಲಿ ಸಿಬ್ಬಂದಿ ಇಲ್ಲ. ಇದ್ದೊಬ್ಬ ಲೈನ್‌ಮನ್‌ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಗ್ರಾಮದಲ್ಲಿ ವಿದ್ಯುತ್‌ ಕೈ ಕೊಟ್ಟಾಗ ಟಾವರ್‌ ಬಂದ್‌ ಆಗುತ್ತದೆ. ಪುನಃ ಟಾವರ್‌ ನಿರ್ವಾಹಕರು ಬಂದು ದುರಸ್ತಿ ಮಾಡುವವರೆಗೂ ಯಥಾಸ್ಥಿತಿ ಮುಂದುವರಿಯುತ್ತದೆ. ಈ ಕುರಿತು ಬಿಎಸ್‌ಎನ್‌ಎಲ್‌ ಬೆಳಗಾವಿ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಹಾಗೂ ಟಾವರ್‌ ಮೇಲ್ವಿಚಾರಕರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.

ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಗ್ರಾಹಕರು ಬದಲಿ ಕಂಪನಿಯ ಸಿಮ್‌ ಮೊರೆ ಹೋದರೂ ಅಚ್ಚರಿಯಿಲ್ಲ. ಇನ್ನಾದರೂ ಅಧಿಕಾರಿಗಳು ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸರಿಪಡಿಸಲು ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ